ಹುಕ್ಕೇರಿ: ತಾಲೂಕಿನ ಕಣಗಲಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಶೌಚಾಲಯಕ್ಕೆ ಸೋಮವಾರ ಲಾರಿ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಳಗಾವಿ ನಗರದ ಅನಗೋಳದ ಜಾವೀದ್ ಅಲ್ಲಾವುದ್ದೀನ್ ಅತ್ತಾರ (49) ಮೃತ ಚಾಲಕ. ನಿಪ್ಪಾಣಿಯಿಂದ ಬೆಳಗಾವಿ ಕಡೆ ಬರುತ್ತಿದ್ದ ಲಾರಿ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಶೌಚಾಲಯಕ್ಕೆ ಗುದ್ದಿದೆ. ಗುದ್ದಿದ ರಭಸಕ್ಕೆ ಶೌಚಾಲಯದ ಬಹುತೇಕ ಭಾಗ ನೆಲಸಮವಾಗಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೌಚಾಲಯಕ್ಕೆ ಲಾರಿ ಗುದ್ದಿ ಚಾಲಕ ಸಾವು
ತಾಲೂಕಿನ ಕಣಗಲಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಶೌಚಾಲಯಕ್ಕೆ ಸೋಮವಾರ ಲಾರಿ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ...
Vijaya Karnataka 15 Jan 2019, 5:00 am