ಆ್ಯಪ್ನಗರ

ಕೋರ್ಟ್‌ ಮೊರೆಗೆ ಮುನ್ನ ಹೊಂದಾಣಿಕೆಗೆ ಪ್ರಯತ್ನಿಸಿ

ಯಮಕನಮರಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗ್ರಾಮದ ಈದ್ಗಾ ಮೈದಾನ ಸಮಸ್ಯೆ ...

Vijaya Karnataka 28 Nov 2018, 5:00 am
ಯಮಕನಮರಡಿ : ಇಲ್ಲಿನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗ್ರಾಮದ ಈದ್ಗಾ ಮೈದಾನ ಸಮಸ್ಯೆ ಕುರಿತು ಶಾಸಕ ಸತೀಶ ಜಾರಕಿಹೊಳಿಯವರ ಅಧ್ಯಕ್ಷ ತೆಯಲ್ಲಿ ಮಂಗಳವಾರ ಅಧಿಕಾರಿಗಳು, ವಕ್ಫ್ ಕಮಿಟಿ ಸದಸ್ಯರು ಹಾಗೂ ಜಮೀನು ಮಾಲಿಕರನ್ನೊಳಗೊಂಡು ಸಭೆ ನಡೆಯಿತು.
Vijaya Karnataka Web BEL-27YMD2


ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಕುಡಚಿ ಹಾಗೂ ಮುಸ್ಲಿಂ ಸಮುದಾಯ ಈದ್ಗಾ ಮೈದಾನದ ಕಾಗದ ಪತ್ರಗಳು ಗ್ರಾಪಂನಲ್ಲಿ ತಿದ್ದುಪಡಿಯಾಗಿದ್ದು ಅವುಗಳ ಜತೆ ಇನ್ನು ಹಲವಾರು ಕಾಗದ ಪತ್ರಗಳು ಅವಶ್ಯವಾಗಿವೆ. ಈ ಸಮಸ್ಯೆ ಬಗ್ಗೆ ಕೋರ್ಟ್‌ ಮೆಟ್ಟಿಲೇರುವ ಮುನ್ನ ಪರಸ್ಪರರಲ್ಲಿ ಹೊಂದಾಣಿಕೆ ಮಾಡಿಕೊಂಡು ಇತ್ಯರ್ಥ ಮಾಡಿಕೊಳ್ಳಲು ಕಾಲಾವಕಾಶವಿದೆ. ಇದಕ್ಕಾಗಿ 15 ದಿನಗಳ ನಂತರ ಪುನಃ ಸಭೆ ಕರೆಯಲಾಗುವುದು ಎಂದರು.

ಡಾ.ರವಿ ಕುಡಚಿ ಹಾಗೂ ಅವರ ತಂದೆ ಮಾತನಾಡಿ, ಈದ್ಗಾ ಮೈದಾನದಲ್ಲಿ ರಸ್ತೆ ಹಾಗೂ ಅವರಿಗೆ ಹಬ್ಬ ಹರಿದಿನಗಳಲ್ಲಿ ಪ್ರಾರ್ಥನೆ ಮಾಡಲು ಜಾಗ ನೀಡಲಾಗಿದೆ. ಅವರ ಜತೆ ಯಾವುದೇ ತರಕಾರೂ ಇಲ್ಲ. ಇನ್ನೂ ಹೆಚ್ಚು ಜಾಗ ಕೇಳಿದಲ್ಲಿ ತಾವು ಕೋರ್ಟ್‌ ಮೆಟ್ಟಿಲೇರುವುದು ಅನಿವಾರ್ಯ. ಇದಕ್ಕೆ ಅಗತ್ಯದ ಕಾಗದ ಪತ್ರಗಳನ್ನು ಸಂಗ್ರಹ ಮಾಡಲಾಗಿದೆ ಎಂದರು.

ಹುಕ್ಕೇರಿ ತಹಸೀಲ್ದಾರ್‌ ಎನ್‌.ಬಿ. ಪಾಟೀಲ ಹಾಗೂ ಬೆಳಗಾವಿ ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಮಾತನಾಡಿದರು. ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ