ಆ್ಯಪ್ನಗರ

ಶಾಲಾ ಕೊಠಡಿ, ಚಾವಣಿ ನಿರ್ಮಾಣಕ್ಕೆ ಪ್ರಯತ್ನ: ರಮೇಶ ಕತ್ತಿ

ಸಂಕೇಶ್ವರ: ಸಮೀಪದ ಶಿರಹಟ್ಟಿ ಕೆ...

Vijaya Karnataka 23 Feb 2019, 5:00 am
ಸಂಕೇಶ್ವರ : ಸಮೀಪದ ಶಿರಹಟ್ಟಿ ಕೆ.ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು.
Vijaya Karnataka Web BEL-22-SANK-01


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಯ ಕಲಾ ವೇದಿಕೆಯ ಚಾವಣಿ ಹಾಗೂ ಅಗತ್ಯವಿರುವ ಕೊಠಡಿ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದುದೆಂದು ತಿಳಿಸಿದ ಅವರು ಶಾಲೆಯ ಎಸ್‌ಡಿಎಂಸಿ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಶಾಲೆಯ ಅಭಿವೃದ್ಧಿ ಸಮಿತಿಯನ್ನು 'ಉತ್ತಮ ಎಸ್‌ಡಿಎಂಸಿ' ಎಂದು ಘೋಷಿಸುವಂತೆ ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ರಾಜು ಮಸ್ತಿ ಅಧ್ಯಕ್ಷ ತೆ ವಹಿಸಿದ್ದರು. ಪ್ರಧಾನಶಿಕ್ಷಕ ಚೌಲಗೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅತಿಥಿಗಳಾಗಿ ಎಪಿಎಂಸಿ ಅಧ್ಯಕ್ಷ ಕಲಪ್ಪ ಜಿನ್ನಪ್ಪ ಪಾಟೀಲ, ಜಿಪಂ ಸದಸ್ಯೆ ಅನ್ನಪೂರ್ಣಾ ಮಾಳಗೆ ಹಾಗೂ ತಾಪಂ ಸದಸ್ಯೆ ವೇದಿಕೆಯಲ್ಲಿದ್ದರು.

ಶಾಲಾ ಕಟ್ಟಡಕ್ಕೆ 23 ಗುಂಟೆ ಜಾಗ ದಾನ ನೀಡಿದ ಬಸಗೌಡ ಪಾಟೀಲ ಹಾಗೂ ಗುರುಸಿದ್ದ ಪಾಟೀಲ ಅವರನ್ನು ಅಭಿನಂದಿಸಲಾಯಿತು. ಇದೇ ವೇಳೆ ಶಾಲೆಗೆ ಮಕಬೂಲ ಅಮ್ಮಣಗಿ ಅವರು ಕಮರ್ಶಿಯಲ್‌ ವಾಟರ್‌ ಫಿಲ್ಟರ್‌, ವಿಶ್ವನಾಥ ಗುಡಸಿ ಮತ್ತು ಶ್ರೀಮಂತ ಗುಡಸಿ ಅವರು ಮ್ಯೂಸಿಕ್‌ ಸಿಸ್ಟಮ್‌ ದೇಣಿಗೆಯಾಗಿ ನೀಡಿದರೆ ಶಾಂತಿನಾಥ ಮಲ್ಲಾಪುರೆ, ಪರಸವ್ವ ಮಾದರ, ಅಣಗೌಡ ಪಾಟೀಲ ಶಾಲೆಗೆ ಧನಸಹಾಯ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ರಮೇಶ ಕತ್ತಿ ಅವರನ್ನು ಸತ್ಕರಿಸಲಾಯಿತು. ಶಿಕ್ಷ ಕ ರಾಜಾರಾಮ ರಜಪೂತ ವರದಿ ವಾಚಿಸಿದರು. ಬಿ.ಎಸ್‌. ಚಡಿಚಾಳ ನಿರೂಪಿಸಿದರು. ಎನ್‌.ಡಿ. ಕಾಜಗಿ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ