ಆ್ಯಪ್ನಗರ

ಪ್ರಜ್ಞೆ ತಪ್ಪಿಸಿ ಮಂಗಳಸೂತ್ರ ಕದ್ದಿದ್ದ ಇಬ್ಬರ ಬಂಧನ

ಬೆಳಗಾವಿ: ಮಹಿಳೆಯ ಪ್ರಜ್ಞೆ ತಪ್ಪಿಸಿ ಮಂಗಳಸೂತ್ರ, ಪರ್ಸ್‌ ಕಳ್ಳತನ ಮಾಡಿದ್ದ ಆರೋಪಿಗಳನ್ನು ಖಡೇಬಜಾರ ಠಾಣೆ ಪೊಲೀಸರು ...

Vijaya Karnataka 6 Dec 2018, 5:00 am
ಬೆಳಗಾವಿ: ಮಹಿಳೆಯ ಪ್ರಜ್ಞೆ ತಪ್ಪಿಸಿ ಮಂಗಳಸೂತ್ರ, ಪರ್ಸ್‌ ಕಳ್ಳತನ ಮಾಡಿದ್ದ ಆರೋಪಿಗಳನ್ನು ಖಡೇಬಜಾರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Vijaya Karnataka Web BEL-5 LBS 11


ಕಾಕತಿ ಗ್ರಾಮದ ಸಿಂಪಲ್‌ ಲೊಂಡೆ ಮತ್ತು ಬಿನಾಬಾಯಿ ಲೊಂಡೆ ಬಂಧಿತರು. ಕಾಕತಿ ಗ್ರಾಮದ ರೇಶ್ಮಾ ಪರಶುರಾಮ ದೇಸಾಯಿ ಅವರು ಕಳೆದ ಅಕ್ಟೋಬರ್‌ನಲ್ಲಿ ಕಾಕತಿಯಿಂದ ಖಾಸಗಿ ಸಾರಿಗೆ ವಾಹನದಲ್ಲಿ ಸಂಚರಿಸುವಾಗ ಆರೋಪಿಗಳು ಪ್ರಜ್ಞೆ ತಪ್ಪಿಸಿ ಮಂಗಳಸೂತ್ರ ಹಾಗೂ ಪರ್ಸ್‌ ಕದ್ದು ಪರಾರಿಯಾಗಿದ್ದರು. ರೇಶ್ಮಾ ದೇಸಾಯಿ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ