ಆ್ಯಪ್ನಗರ

ಬೆಳಗಾವಿ: ಬಾವಿಗೆ ಬಿದ್ದ ಚೆಂಡು ಎತ್ತಲು ಹೋಗಿ ಇಬ್ಬರು ಬಾಲಕರು ಸಾವು!

ಆಟವಾಡುತ್ತಿರುವಾಗ ಚೆಂಡು ಬಾವಿಗೆ ಬಿದ್ದಿದ್ದು, ಅದನ್ನು ಎತ್ತಲು ಹೋಗಿ ಇಬ್ಬರು ಬಾಲಕರು ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ಏ.9ರಂದು ನಡೆದಿದೆ.

Vijaya Karnataka Web 9 Apr 2021, 10:35 pm
ಬೆಳಗಾವಿ: ಬಾವಿಗೆ ಬಿದ್ದ ಚೆಂಡು ಎತ್ತಲು ಹೋಗಿ ಇಬ್ಬರು ಬಾಲಕರು ಮೃತಪಟ್ಟ ಘಟನೆ ಏ.9ರಂದು ಬೆಳಗಾವಿಯಲ್ಲಿ ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಇಲ್ಲಿನ ಮಜಗಾಂವ ಕಲ್ಮೇಶ್ವರ ನಗರದ ಆಕಾಶ ಅಡಿವೆಪ್ಪ ಹಣಬರ (15) ಮತ್ತು ಆನಂದ ಅಡಿವೆಪ್ಪ ಹಣಬರ (13) ಮೃತ ಬಾಲಕರು.

ಕಲ್ಮೇಶ್ವರ ನಗರದ ತಮ್ಮ ಮನೆ ಹಿಂಭಾಗದಲ್ಲಿ ಸಹೋದರರಿಬ್ಬರು ಚೆಂಡಾಟ ಆಡುತ್ತಿದ್ದ ಸಂದರ್ಭದಲ್ಲಿ ಚೆಂಡು ತೆರೆದ ಬಾವಿಗೆ ಬಿದ್ದಿತ್ತು. ಚೆಂಡು ತೆಗೆಯಲೆಂದು ತಮ್ಮ ಆನಂದ ಹಣಬರ ನೀರು ತುಂಬಿದ್ದ ಬಾವಿಗೆ ಜಿಗಿದಿದ್ದಾನೆ. ಸಹೋದರನ ರಕ್ಷಣೆಗೆಂದು ಅಣ್ಣ ಆಕಾಶ ಕೂಡ ಬಾವಿಗೆ ಇಳಿದಿದ್ದಾನೆ. ಆದರೆ, ಇಬ್ಬರೂ ಈಜಿ ಮೇಲೆ ಬರಲಾಗದೆ ಬಾವಿಯಲ್ಲಿಯೇ ಮೃತಪಟ್ಟಿದ್ದಾರೆ.

ಬಾಲಕರಿಬ್ಬರೂ ಕಾಣದಿದ್ದರಿಂದ ಹುಡುಕಾಟ ಆರಂಭಿಸಿದಾಗ ಬಾವಿಯಲ್ಲಿ ಬಿದ್ದಿರುವುದು ತಿಳಿದು ಬಂದಿದೆ. ತಕ್ಷಣ ಉದ್ಯಮಭಾಗ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಟೈಲ್ಸ್ ಫಿಟಿಂಗ್ ಮಾಡುವ ಕೆಲಸದಲ್ಲಿರುವ ಮೃತ ಮಕ್ಕಳ ತಂದೆ ಮಜಗಾಂವನ ಕಲ್ಮೇಶ್ವರ ನಗರದಲ್ಲಿ ವಾಸವಾಗಿದ್ದರು. ಕುಟುಂಬದ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ತಂದೆತಾಯಿ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಉದ್ಯಮಬಾಗ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ