ಆ್ಯಪ್ನಗರ

ಒಂದೇ ಅಂಗನವಾಡಿಗೆ ಇಬ್ಬರು ಸಹಾಯಕಿಯರು

ಪಾಲಬಾವಿ: ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ಸೀಮಾ ಲಕ್ಕಮ್ಮದೇವಿ ದೇವಸ್ಥಾನ ಬಳಿಯ ಅಂಗನವಾಡಿ ಕೇಂದ್ರ ಸಂಖ್ಯೆ ...

Vijaya Karnataka 25 Jun 2019, 5:00 am
ಪಾಲಬಾವಿ : ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ಸೀಮಾ ಲಕ್ಕಮ್ಮದೇವಿ ದೇವಸ್ಥಾನ ಬಳಿಯ ಅಂಗನವಾಡಿ ಕೇಂದ್ರ ಸಂಖ್ಯೆ 6ರಲ್ಲಿ ಇಬ್ಬರು ಸಹಾಯಕಿಯರು ಕಾರ್ಯರ್ನಿಹಿಸುತ್ತಿದ್ದು ಒಬ್ಬರನ್ನೇ ಮುಂದುವರಿಸಲು ಆಗ್ರಹಿಸಿ ಸ್ಥಳೀಯ ಮಹಿಳೆಯರು ಅಂಗನವಾಡಿ ಕೇಂದ್ರಕ್ಕೆ ಸೋಮವಾರ ಬೀಗ ಜಡಿದು ಪ್ರತಿಭಟಿಸಿದರು.
Vijaya Karnataka Web BEL-24PALABAVI2, PHOTO


ಜೂ.22ರಂದು ಅಂಗನವಾಡಿ ಕೇಂದ್ರಕ್ಕೆ ಸಹಾಯಕಿಯಾಗಿ ಹಾಜರಾದ ರೇಣುಕಾ ಶ್ರೀÍ æೖಲ ಮಾಂಗ ಅವರು ಖಣದಾಳ ಗ್ರಾಮದಲ್ಲಿ ವಾಸವಿದ್ದು ಅಂಗನವಾಡಿ ಕೇಂದ್ರದಿಂದ ಸುಮಾರು 4ಕಿಮೀ ದೂರದಿಂದ ಬರಬೇಕಾಗುತ್ತದೆ. ಇದರಿಂದ ತೊಂದರೆಯಾಗುತ್ತಿದ್ದು ಇದೇ ಅಂಗನವಾಡಿ ಕೇಂದ್ರದಲ್ಲಿ 7ವರ್ಷಗಳವರೆಗೆ ಕಾರ್ಯ ನಿರ್ವಹಿಸಿದ ಬಂಗಾರೆವ್ವ ಜಗಲಸಾರ ಅವರನ್ನು ಈ ಅಂಗನವಾಡಿಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಮೇಲಾಧಿಕಾರಿಗಳಿಗೆ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಎಸ್‌.ಎಸ್‌.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಅಂಗನವಾಡಿ ಕಾರ್ಯಕರ್ತೆ ಎಸ್‌.ಎಸ್‌.ಮಠಪತಿ, ಸಹಾಯಕಿಯರಾದ ರೇಣುಕಾ ಮಾದರ, ಬಂಗಾರೆವ್ವ ಜಗಲಸಾರ, ಸ್ಥಳೀಯ ನಿವಾಸಿಗಳಾದ ನಿರ್ಮಲಾ ಹಳ್ಳೂರ, ರೇಖಾ ಕಟಗಿ, ಲಕ್ಷ್ಮೀ ಹಳ್ಳೂರ, ಸುಧಾ ಹೊಸಟ್ಟಿ, ಗಿರಿಜಾ ಹೊಸಟ್ಟಿ, ಸುವರ್ಣಾ ಹಿಡಕಲ್ಲ, ರತ್ನಾ ಹಿಡಕಲ್ಲ, ನಾಗವ್ವ ಭಜಂತ್ರಿ, ರಾಮವ್ವ ಹಿಡಕಲ್ಲ, ಪಲ್ಲವಿ ಭಜಂತ್ರಿ, ಗೌರವ್ವ ಹೊಸಟ್ಟಿ, ಯಲ್ಲವ್ವ ಬಿರಾಜ, ಮಾಯವ್ವ ಹೊಸಟ್ಟಿ, ಲಕ್ಕವ್ವ ಹುಲಹಣಿ, ದೊಡ್ಡವ್ವ ಹಳ್ಳೂರ, ವಿಜಯಲಕ್ಷ್ಮೀ ಹಿಡಕಲ್ಲ, ಪಾರ್ವತಿ ಭಜಂತ್ರಿ, ನಾಗವ್ವ ವಡ್ಡರ, ಸಾವಕ್ಕ ಹಳ್ಳೂರ, ರಾಘವೇಂದ್ರ ಹಿಡಕಲ್ಲ, ರವಿ ವಡ್ಡರ, ಗೋಪಾಲ ವಡ್ಡರ, ಗೋವಿಂದ ವಡ್ಡರ, ಪರಶುರಾಮ ವಡ್ಡರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ