ಆ್ಯಪ್ನಗರ

ಹಾಡಹಗಲೇ ಎರಡು ಮನೆ ದರೋಡೆ

ನಗರದಲ್ಲಿ ಎರಡು ಕಡೆ ಹಾಡಹಗಲೇ ಮನೆಗೆ ಕನ್ನ ಹಾಕಿರುವ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕದ್ದು ಪರಾರಿಯಾಗಿದ್ದಾರೆ.

Vijaya Karnataka 13 Oct 2018, 5:00 am
ಬೆಳಗಾವಿ: ನಗರದಲ್ಲಿ ಎರಡು ಕಡೆ ಹಾಡಹಗಲೇ ಮನೆಗೆ ಕನ್ನ ಹಾಕಿರುವ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕದ್ದು ಪರಾರಿಯಾಗಿದ್ದಾರೆ.
Vijaya Karnataka Web BLG-1210-2-52-12MAHESH4


ಎಪಿಎಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ಸದಾಶಿವ ನಗರ ಮತ್ತು ಮಾಳ ಮಾರುತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮಹಾಂತೇಶ ನಗರದಲ್ಲಿ ಮನೆಗಳ್ಳತನ ನಡೆದಿದೆ. 7 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿವೆ.

ಸದಾಶಿವ ನಗರದ ಶಕುಂತಲಾ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಲ್ಲಿರುವ ಮಹೇಶ ರುದ್ರಪ್ಪ ಲಕ್ಕುಂಡಿ ಎಂಬುವರು ಕೆಲಸಕ್ಕೆ ಹೋಗಿದ್ದ ವೇಳೆ ಬಾಗಿಲ ಬೀಗ ಮುರಿದ ಕಳ್ಳರು ಬೆಡ್‌ರೂಮಿನ ಲಾಕರ್‌ನಲ್ಲಿಟ್ಟಿದ್ದ ನಗದು ಸೇರಿದಂತೆ 3.36 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣ ಕದ್ದಿದ್ದಾರೆ. ಅದೇ ರೀತಿ, ಮಹಾಂತೇಶ ನಗರದ ಶಿವತೀರ್ಥ ಅಪಾರ್ಟ್‌ಮೆಂಟ್‌ ಹಿಂಭಾಗದ ಮಲ್ರಭಾ ಪಾಟೀಲ ಎಂದಿನಂತೆ ಕೆಲಸಕ್ಕೆ ಹೋಗಿರುವುದನ್ನು ಗಮನಿಸಿದ ಕಳ್ಳರು ಬೀಗ ಮುರಿದು ಮನೆಯಲ್ಲಿಟ್ಟಿದ್ದ 9 ತೊಲೆ ತೂಕದ ಚಿನ್ನಾಭರಣ ಮತ್ತು 50 ಸಾವಿರ ರೂ.ನಗದು ಕಳ್ಳತನ ಮಾಡಿದ್ದಾರೆ. ಈ ಕುರಿತು ಎರಡೂ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ರೇಖಾಚಿತ್ರ ಸಿದ್ಧ: ಎಪಿಎಂಸಿ ಠಾಣೆ ವ್ಯಾಪ್ತಿಯ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸ್ಥಳೀಯರ ಸಹಾಯದಿಂದ ಶಂಕಿತ ಆರೋಪಿಗಳ ಮುಖದ ರೇಖಾಚಿತ್ರ ಸಿದ್ಧಪಡಿಸಿದ್ದಾರೆ. ರೇಖಾಚಿತ್ರ ಹೋಲುವ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಕಂಟ್ರೋಲ್‌ ರೂಂ 0831-2405233, ಮೊ.9480804100ಗೆ ಮಾಹಿತಿ ನೀಡುವಂತೆ ಇನ್‌ಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ಮನವಿ ಮಾಡಿದ್ದಾರೆ. ರೇಖಾಚಿತ್ರ ಹೊಂದುವ ಆರೋಪಿಗಳನ್ನು ಗುರುತಿಸಿದಲ್ಲಿ ಸೂಕ್ತ ಬಹುಮಾನ ನೀಡುವುದಾಗಿಯೂ ಪೊಲೀಸರು ಪ್ರಕಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ