ಆ್ಯಪ್ನಗರ

ಟ್ರ್ಯಾಕ್ಟರ್‌ ಟ್ರೇಲರ್‌ ಹುಕ್ಕು ಕಳಚಿ ಬಿದ್ದು ಇಬ್ಬರ ದುರ್ಮರಣ

ರಾಮಾಪುರ ಗ್ರಾಮದ ಬಳಿ ಟ್ರ್ಯಾಕ್ಟರ್‌ ಟ್ರೇಲರ್‌ನ ಹುಕ್ಕು ಕಳಚಿ ಬಿದ್ದ ಪರಿಣಾಮ ಟ್ರೇಲರ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ.

ವಿಕ ಸುದ್ದಿಲೋಕ 13 May 2017, 8:34 am

ಖಾನಾಪುರ: ತಾಲೂಕಿನ ರಾಮಾಪುರ ಗ್ರಾಮದ ಬಳಿ ಟ್ರ್ಯಾಕ್ಟರ್‌ ಟ್ರೇಲರ್‌ನ ಹುಕ್ಕು ಕಳಚಿ ಬಿದ್ದ ಪರಿಣಾಮ ಟ್ರೇಲರ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ತಾಲೂಕಿನ ಗುಂಡೇನಟ್ಟಿ ಗ್ರಾಮದ ಅದೃಶ್ಯಪ್ಪ ಪಾಟೀಲ (20) ಮತ್ತು ಚಂದ್ರಪ್ಪ ಮಾದರ ಎಂದು ಗುರುತಿಸಲಾಗಿದೆ.

Vijaya Karnataka Web two killed by tractor trailer
ಟ್ರ್ಯಾಕ್ಟರ್‌ ಟ್ರೇಲರ್‌ ಹುಕ್ಕು ಕಳಚಿ ಬಿದ್ದು ಇಬ್ಬರ ದುರ್ಮರಣ


ಇವರು ಅಳ್ನಾವರ ಪಟ್ಟಣದಿಂದ ನೀಲಗಿರಿ ಕಟ್ಟಿಗೆ ಹೇರಿಕೊಂಡು ಮರಳುತ್ತಿದ್ದ ವೇಳೆ ರಾಮಾಪುರದ ಹಿಡಕಲ್‌ ಕ್ರಾಸ್‌ ಬಳಿ ಟ್ರ್ಯಾಕ್ಟರ್‌ನ ಟ್ರೇಲರ್‌ ಹುಕ್ಕು ಕಳಚಿದೆ. ನೀಲಗಿರಿ ಕಟ್ಟಿಗೆ ಮೇಲೆ ಕುಳಿತಿದ್ದ ಅದೃಶ್ಯಪ್ಪ ಮತ್ತು ಚಂದ್ರಪ್ಪ ಆಯ ತಪ್ಪಿ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ನಂದಗಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಹರಿದು ಸವಾರ ಸಾವು: ತಾಲೂಕಿನ ಬೇಕವಾಡ ಕ್ರಾಸ್‌ ಬಳಿ ಬೈಕ್‌ ಮೇಲೆ ಲಾರಿ ಹರಿದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ