ಆ್ಯಪ್ನಗರ

ಹುಕ್ಕೇರಿ ಜೈಲಿನಿಂದ ಇಬ್ಬರು ಕೈದಿಗಳು ಪರಾರಿ

ಹುಕ್ಕೇರಿ (ಬೆಳಗಾವಿ): ಪಟ್ಟಣದ ಹಳೇ ತಹಸೀಲ್ದಾರ ಕಚೇರಿ ಆವರಣದಲ್ಲಿ ...

Vijaya Karnataka 24 Aug 2019, 5:00 am
ಹುಕ್ಕೇರಿ (ಬೆಳಗಾವಿ): ಪಟ್ಟಣದ ಹಳೇ ತಹಸೀಲ್ದಾರ ಕಚೇರಿ ಆವರಣದಲ್ಲಿ ಇರುವ ಉಪ ಬಂದಿಖಾನೆಯಿಂದ ಇಬ್ಬರು ಕೈದಿಗಳು ಗುರುವಾರ ರಾತ್ರಿ ಪರಾರಿಯಾಗಿದ್ದಾರೆ.
Vijaya Karnataka Web BEL-23 HUKKERI-3


ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್‌ ತಮ್ಮಾಣಿ ಲಂಬುಗೋಳ (26), ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಪರಶುರಾಮ ಅಶೋಕ ಕಮಟೇಕರ (19) ಪರಾರಿಯಾದವರು.

ಜೈಲಿನ ಶೌಚಾಲಯದ ಕಿಟಕಿಯ ಸಲಾಕೆಗಳನ್ನು ಕಿತ್ತು ಹಾಕಿ ಇವರು ಓಡಿ ಹೋಗಿದ್ದಾರೆ. ಇವರ ಮೇಲೆ ಚಿಕ್ಕೋಡಿ ಹಾಗೂ ಅಂಕಲಿ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಶ್ವಾನದಳದೊಂದಿಗೆ ಹುಡುಕಾಟ ನಡೆಸಿದ್ದು, ಜೈಲಿನಲ್ಲಿರುವ ಇನ್ನುಳಿದ ಕೈದಿಗಳ ವಿಚಾರಣೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್‌ ವರಿಷ್ಠ ರಾಮ ಅರಸಿದ್ಧ, ತಹಸೀಲ್ದಾರ ರೇಷ್ಮಾ ತಾಳಿಕೋಟಿ, ಡಿವೈಎಸ್ಪಿ ಡಿ.ಟಿ.ಪ್ರಭು, ಸಿಪಿಐ ಸುಂದರೇಶ್‌ ಹೊಳೆನ್ನವರ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹುಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ