ಆ್ಯಪ್ನಗರ

ಎರಡು ದೇವಾಲಯಗಳು ಜಲಾವೃತ

ಖಾನಾಪುರ: ಭೀಮಗಡ, ಕಣಕುಂಬಿ, ಲೋಂಡಾ ಮತ್ತು ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿಯಿಡೀ ಸತತವಾಗಿ ಮಳೆ ಸುರಿದಿದೆ...

Vijaya Karnataka 13 Jul 2018, 5:00 am
ಖಾನಾಪುರ: ಭೀಮಗಡ, ಕಣಕುಂಬಿ, ಲೋಂಡಾ ಮತ್ತು ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿಯಿಡೀ ಸತತವಾಗಿ ಮಳೆ ಸುರಿದಿದೆ. ಗುರುವಾರವೂ ಮುಂದುವರಿದ ಸತತಧಾರೆಯಿಂದಾಗಿ ಮಲಪ್ರಭಾ ತೀರದಲ್ಲಿರುವ ಹಬ್ಬನಹಟ್ಟಿಯ ಆಂಜನೇಯ ದೇವಾಲಯ ಸಂಪೂರ್ಣ ಜಲಾವೃತಗೊಂಡಿದ್ದು, ತಾಲೂಕಿನ ಇಟಗಿ ಗ್ರಾಮದ ಹೊರವಲಯದ ಐತಿಹಾಸಿಕ ಮರುಳ ಶಂಕರ ದೇವಾಲಯವೂ ಸಹ ಮಲಪ್ರಭಾ ನದಿಯಲ್ಲಿ ಮುಳುಗಿದೆ.
Vijaya Karnataka Web BEL-12KHANAPUR8


ಮಳೆಯಿಂದಾಗಿ ತಾಲೂಕಿನ ಕಾನನದಂಚಿನ ಗ್ರಾಮಗಳಲ್ಲಿ ಬಹುತೇಕ ಜನಜೀವನ ಅಸ್ತವ್ಯಸ್ತವಾಗಿದೆ. ಪಶ್ಚಿಮ ಭಾಗದಲ್ಲಿರುವ ಕೃಷಿ ಜಮೀನುಗಳಲ್ಲಿ ನೀರು ಶೇಖರಣೆಗೊಂಡು ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ತಾಲೂಕಿನ ಪೂರ್ವಭಾಗದ ಹಲವು ಕಡೆಗಳಲ್ಲೂ ಗುರುವಾರ ದಿನವಿಡೀ ಮಳೆ ಸುರಿದಿದೆ. ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಹಲವೆಡೆ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾದ ವರದಿಯಾಗಿದೆ.

ಗುರುವಾರ ತಾಲೂಕಿನ ನಂದಗಡ ಗ್ರಾಮದಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ. ಉಳಿದಂತೆ ಯಾವುದೇ ಜೀವಹಾನಿಯಾಗಿಲ್ಲ ಎಂದು ತಹಸೀಲ್ದಾರ್‌ ಕಚೇರಿಯ ಮೂಲಗಳು ತಿಳಿಸಿವೆ,

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ