ಆ್ಯಪ್ನಗರ

ಯುವಕರ ಸಮಯ ಪ್ರಜ್ಞೆ: ತಪ್ಪಿದ ಭಾರಿ ರೈಲು ದುರಂತ

ಕೊಲ್ಲಾಪುರ-ಹೈದರಾಬಾದ್ ರೈಲು ಹುಬ್ಬಳ್ಳಿ ಕಡೆ ಬರುತ್ತಿತ್ತು. ಈ ವೇಳೆ ಖಾನಾಪುರದ ರೈಲ್ವೆ ಹಳಿ ಮೇಲೆ ಮರವೊಂದರ ದೊಡ್ಡ ಟೊಂಗೆ ಬಿದ್ದಿತ್ತು. ಅಷ್ಟೊತ್ತಿಗೆ ಬೈಕ್‍ನಲ್ಲಿ ಹೋಗುತ್ತಿದ್ದ ರಿಯಾಜ್ ಮತ್ತು ತೌಫಿಕ್ ರೈಲ್ವೆ ಹಳಿ ಮೇಲೆ ಮರ ಬಿದ್ದಿರುವುದನ್ನು ಗಮನಿಸಿದರು.

Vijaya Karnataka Web 17 Jan 2019, 9:37 pm
ಬೆಳಗಾವಿ: ಖಾನಾಪುರ ತಾಲೂಕಿನ ಯುವಕರಿಬ್ಬರು ಸಮಯ ಪ್ರಜ್ಞೆ ತೋರಿ ಸಂಭವಿಸಬಹುದಾಗಿದ್ದ ರೈಲು ದುರಂತವೊಂದನ್ನು ತಪ್ಪಿಸಿ ರೈಲ್ವೆ ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Vijaya Karnataka Web ರೈಲು ಅಪಘಾತ
ರೈಲು ಅಪಘಾತ


ರೈಲು ಹಳಿ ಮೇಲೆ ಮರದ ಟೊಂಗೆ ಬಿದ್ದಿದ್ದನ್ನು ಕಂಡ ಯುವಕರು ಸುಮಾರು 300 ಮೀಟರ್ ಮೊದಲೇ ರೈಲಿಗೆ ಕೈ ಮಾಡಿ ಅಪಘಾತದ ಸೂಚನೆ ನೀಡಿ ಪ್ರಯಾಣಿಕರ ಜೀವ ಉಳಿಸಿದ್ದಾರೆ.

ಇದರಿಂದ ದೊಡ್ಡದೊಂದು ಅಪಘಾತ ತಪ್ಪಿದೆ. ರಿಯಾಜ್ ಖಾನಾಪುರ (23) ಮತ್ತು ತೌಫಿಕ್ (32) ಎನ್ನುವ ಯುವಕರೇ ಇಂಥದೊಂದು ಸಾಹಸ ಮೆರೆದಿದ್ದಾರೆ ಎಂದು ರೈಲಿನ ಲೋಕೋ ಪೈಲಟ್ ಪಿ.ಪಿ. ಪವಾರ್ ಇಲಾಖೆಗೆ ಪತ್ರ ಬರೆದು ಯುವಕರಿಬ್ಬರ ಸಾಹಸವನ್ನು ದಾಖಲಿಸಿದ್ದಾರೆ. ರೈಲಿನಲ್ಲಿ ನೂರಾರು ಪ್ರಯಾಣಿಕರಿದ್ದರು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಆಗಿದ್ದೇನು?

ಕೊಲ್ಲಾಪುರ-ಹೈದರಾಬಾದ್ ರೈಲು ಹುಬ್ಬಳ್ಳಿ ಕಡೆ ಬರುತ್ತಿತ್ತು. ಈ ವೇಳೆ ಖಾನಾಪುರದ ರೈಲ್ವೆ ಹಳಿ ಮೇಲೆ ಮರವೊಂದರ ದೊಡ್ಡ ಟೊಂಗೆ ಬಿದ್ದಿತ್ತು. ಅಷ್ಟೊತ್ತಿಗೆ ಬೈಕ್‍ನಲ್ಲಿ ಹೋಗುತ್ತಿದ್ದ ರಿಯಾಜ್ ಮತ್ತು ತೌಫಿಕ್ ರೈಲ್ವೆ ಹಳಿ ಮೇಲೆ ಮರ ಬಿದ್ದಿರುವುದನ್ನು ಗಮನಿಸಿದರು.

ತಕ್ಷಣ ಅವರಿಬ್ಬರು ಸಮೀಪದ ರೈಲ್ವೆ ಬ್ರಿಜ್ ಮೇಲೆ ನಿಂತು ರೈಲು ನಿಲ್ಲಿಸುವಂತೆ ಪೈಲಟ್‍ಗೆ ಕೈ ಸನ್ನೆ ಮಾಡಿದ್ದಾರೆ. ಯುವಕರ ಸಂದೇಶ ಅರಿತ ಪೈಲಟ್ ರೈಲನ್ನು ನಿಲ್ಲಿಸಲು ಮುಂದಾಗಿದ್ದಾರೆ.

ಮರ ಬಿದ್ದ ಸ್ಥಳದಿಂದ 300 ದೂರದಲ್ಲಿ ಯುವಕರು ಸನ್ನೆ ನೀಡಿದ್ದರಿಂದ ರೈಲು ನಿಧಾನವಾಗುತ್ತದ ಮರದ ಟೊಂಗೆ ಬಿದ್ದ ಸ್ಥಳಕ್ಕೆ ಬಂದು ನಿಂತಿದೆ. ರೈಲ್ವೆಯ ಇಂಜಿನ್ ಮರದ ಟೊಂಗೆಯನ್ನು ಹಾಯ್ದಿತ್ತು.

ಅಷ್ಟೊತ್ತಿಗೆ ಸ್ಥಳೀಯರು ಜಮಾಯಿಸಿ 20 ನಿಮಿಷದಲ್ಲಿ ಮರದ ಟೊಂಗೆ ತೆರವುಗೊಳಿಸಿದರು. ಇಂಥ ಸಂದರ್ಭದಲ್ಲಿ ಸಂಚಾರ ಸುಗಮಗೊಳಿಸಲು ಕನಿಷ್ಠ ಎರಡು ತಾಸು ಬೇಕಾಗುತ್ತದೆ. ಯುವಕರ ಸಮಯ ಪ್ರಜ್ಞೆಯಿಂದ ಅಪಾಯ ತಪ್ಪಿತು. ಸಾರ್ವಜನಿಕರ ನೆರವಿನಿಂದ ರೈಲು ಸಂಚಾರ ಸುಗಮವಾಯಿತು ಎಂದು ರೈಲ್ವೆಯ ಲೋಕೋ ಪೈಲಟ್ ಪಿ.ಪಿ. ಪವಾರ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ