ಆ್ಯಪ್ನಗರ

ಓಕುಳಿಯಾಡಿ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರುಪಾಲು!

ಇಚಲಕರಂಜಿ: ರಂಗಪಂಚಮಿಯ ದಿನವಾದ ಸೋಮವಾರ ಮಧ್ಯಾಹ್ನದ ವರೆಗೆ ಬಣ್ಣದಾಟವಾಡಿದ ರುಯಿ ಗ್ರಾಮದ ಸಮೀಪವಿರುವ ...

Vijaya Karnataka 26 Mar 2019, 5:00 am
ಇಚಲಕರಂಜಿ :ರಂಗಪಂಚಮಿಯ ದಿನವಾದ ಸೋಮವಾರ ಮಧ್ಯಾಹ್ನದ ವರೆಗೆ ಬಣ್ಣದಾಟವಾಡಿದ ರುಯಿ ಗ್ರಾಮದ ಸಮೀಪವಿರುವ ಪಂಚಗಂಗಾ ನದಿಗೆ ತೆರಳಿ ಸ್ನಾನ ಮಾಡುತ್ತಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ.
Vijaya Karnataka Web BEL-25ICH7


ಇಚಲಕರಂಜಿಯ ಅಷ್ಟವಿನಾಯಕ ಹೌಸಿಂಗ್‌ ಸೊಸೈಟಿ ಪರಿಸರದ ಶುಭಂ ಮಹಾಜನ (21) ಹಾಗೂ ಪ್ರಥಮೇಶ ಸುಬೇದಾರ (18) ನೀರುಪಾಲಾದವರು. ಇವರಿಬ್ಬರೂ ತಮ್ಮ ಸ್ನೇಹಿತರಾದ ರಾಕೇಶ ಮಹಾಜನ, ಸಚಿನ್‌ ಕೋರವಿ, ಹೃಷಿಕೇಶ ಮುಳೆ, ಪ್ರಕಾಶ ಸುಬೇದಾರ ಕೂಡಿ ರುಯಿ ಸಮೀಪವಿರುವ ಪಂಚಗಂಗಾ ನದಿಗೆ ಸ್ನಾನ ಮಾಡಲು ಮಧ್ಯಾಹ್ನ ತೆರಳಿದ್ದರು.

ಶುಭಂ ಮಹಾಜನ ಶರದ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 2ನೇ ವರ್ಷದಲ್ಲಿ ಓದುತ್ತಿದ್ದು ಪ್ರಥಮೇಶ ಕಬನೂರ ಹೈಸ್ಕೂಲಿನಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ.

ಹಾತಕಣಂಗಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಪೊಲೀಸ್‌ ಅಧಿಕಾರಿ ನಿತೀಶ ತರಾಳ, ಗ್ರಾಮಲೆಕ್ಕಾಧಿಕಾರಿ ಆರ್‌.ಡಿ. ಪೂಜಾರಿ, ಹಾತಕಣಂಗಲೆ ಪಿಎಸ್‌ಐ ಶಂಕರ ಚವಾಣ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಸೋಮವಾರ ತಡರಾತ್ರಿಯವರೆಗೂ ನೀರುಪಾಲಾದವರ ಪತ್ತೆಗೆ ಶೋಧ ಕಾರ್ಯ ನಡೆದಿದ್ದು ಸ್ಥಳೀಯರೂ ನೆರವು ನೀಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ