ಉಗಾರ : ಉಗಾರ ಖುರ್ದ ಗ್ರಾಮದೇವತೆ ಶ್ರೀ ಲಕ್ಷ್ಮೀ(ಲಗಮವ್ವಾ) ದೇವಿಯ ಜಾತ್ರೆ ಮೇ 14 ರಿಂದ 17ರ ವರೆಗೆ ನಡೆಯಲಿದೆ.
ಶ್ರೀ ಲಕ್ಷ್ಮೀ ದೇವಿಯ ಜಾತ್ರಾ ಕಮಿಟಿ ಕಾರ್ಯಾಲಯದ ಉದ್ಘಾಟನೆಯನ್ನು ಮಂದಿರದ ಕಮಿಟಿ ಟ್ರಸ್ಟಿ ಉಪಾಧ್ಯಕ್ಷ ಮಾಜಿ ಶಾಸಕ ರಾಜು ಕಾಗೆ ಮಂಗಳವಾರ ನೆರವೇರಿಸಿದರು. ಜಾತ್ರೆ ಯಶಸ್ವಿಗೊಳಿಸಲು ಶ್ರೀ ಲಕ್ಷ್ಮೀ ಟ್ರಸ್ಟ್ ಕಮಿಟಿಯ ಚೇರ್ಮನ್ ದಾದುಬಾ ಥೊರುಸೆಯವರ ನೇತೃತ್ವದಲ್ಲಿ ಸಲಹಾ ಸಮಿತಿಗಳನ್ನು ರಚಿಸಲಾಯಿತು.
ಮೇ 14 ರಂದು ಬೆಳಗ್ಗೆ ಶ್ರೀ ಲಕ್ಷ್ಮೀ ದೇವಿ ಪಲ್ಲಕ್ಕಿ ಮೆರವಣೆಗೆ, 15 ರಂದು ಸಂಜೆ ದೇವಿಗೆ ಮಹಾಪೂಜೆ ಮತ್ತು ನೈವೇದ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಇದೇ ರೀತಿ ದನಗಳ ಜಾತ್ರೆ, ಭವ್ಯ ಕೃಷಿ ಪ್ರದರ್ಶನ ಮತ್ತು ಶರ್ಯತ್ತುಗಳು ಹಮ್ಮಿಕೊಳ್ಳಲಾಗಿದೆ ಎಂದು ದಾದುಬಾ ಥೋರುಶೆ ಹೇಳಿದರು.
ಪುರಸಭೆ ಅಧ್ಯಕ್ಷ ಶಶಿಕಾಂತ ಕಾಂಬಳೆ, ಸದಸ್ಯರಾದ ಪ್ರಫುಲ್ಲ ಥೋರುಸೆ, ವಿಜಯ್ ಆಸುದೆ, ಯೋಗೇಶ ಕುಂಬಾರ, ಮಾಜಿ ಗ್ರಾಪಂ ಅಧ್ಯಕ್ಷ ಸಂಜಯ ಪಾಟೀಲ, ವಿವೇಕ ನಾಯಿಕ್, ಭೀಮು ಬಸ್ತವಾಡೆ, ದಿಲೀಪ ಹುಲ್ಲೋಳೆ, ವಿದ್ಯಾಧರ ನಾಗಾವೆ, ರುಸ್ತುಂ ಸುತಾರ, ಬಸು ಸಾಂಗಾವೆ, ಹನಮಂತ ಜಗದಾಳೆ, ಸೇರಿದಂತೆ ಅನೇಕರು ಇದ್ದರು.
ಶ್ರೀ ಲಕ್ಷ್ಮೀ ದೇವಿಯ ಜಾತ್ರಾ ಕಮಿಟಿ ಕಾರ್ಯಾಲಯದ ಉದ್ಘಾಟನೆಯನ್ನು ಮಂದಿರದ ಕಮಿಟಿ ಟ್ರಸ್ಟಿ ಉಪಾಧ್ಯಕ್ಷ ಮಾಜಿ ಶಾಸಕ ರಾಜು ಕಾಗೆ ಮಂಗಳವಾರ ನೆರವೇರಿಸಿದರು. ಜಾತ್ರೆ ಯಶಸ್ವಿಗೊಳಿಸಲು ಶ್ರೀ ಲಕ್ಷ್ಮೀ ಟ್ರಸ್ಟ್ ಕಮಿಟಿಯ ಚೇರ್ಮನ್ ದಾದುಬಾ ಥೊರುಸೆಯವರ ನೇತೃತ್ವದಲ್ಲಿ ಸಲಹಾ ಸಮಿತಿಗಳನ್ನು ರಚಿಸಲಾಯಿತು.
ಮೇ 14 ರಂದು ಬೆಳಗ್ಗೆ ಶ್ರೀ ಲಕ್ಷ್ಮೀ ದೇವಿ ಪಲ್ಲಕ್ಕಿ ಮೆರವಣೆಗೆ, 15 ರಂದು ಸಂಜೆ ದೇವಿಗೆ ಮಹಾಪೂಜೆ ಮತ್ತು ನೈವೇದ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಇದೇ ರೀತಿ ದನಗಳ ಜಾತ್ರೆ, ಭವ್ಯ ಕೃಷಿ ಪ್ರದರ್ಶನ ಮತ್ತು ಶರ್ಯತ್ತುಗಳು ಹಮ್ಮಿಕೊಳ್ಳಲಾಗಿದೆ ಎಂದು ದಾದುಬಾ ಥೋರುಶೆ ಹೇಳಿದರು.
ಪುರಸಭೆ ಅಧ್ಯಕ್ಷ ಶಶಿಕಾಂತ ಕಾಂಬಳೆ, ಸದಸ್ಯರಾದ ಪ್ರಫುಲ್ಲ ಥೋರುಸೆ, ವಿಜಯ್ ಆಸುದೆ, ಯೋಗೇಶ ಕುಂಬಾರ, ಮಾಜಿ ಗ್ರಾಪಂ ಅಧ್ಯಕ್ಷ ಸಂಜಯ ಪಾಟೀಲ, ವಿವೇಕ ನಾಯಿಕ್, ಭೀಮು ಬಸ್ತವಾಡೆ, ದಿಲೀಪ ಹುಲ್ಲೋಳೆ, ವಿದ್ಯಾಧರ ನಾಗಾವೆ, ರುಸ್ತುಂ ಸುತಾರ, ಬಸು ಸಾಂಗಾವೆ, ಹನಮಂತ ಜಗದಾಳೆ, ಸೇರಿದಂತೆ ಅನೇಕರು ಇದ್ದರು.