ಆ್ಯಪ್ನಗರ

ನಾನು ಸಿಎಂ ಆಗುವುದು ಖಂಡಿತ: ಕರ್ನಾಟಕದ ಮುಖ್ಯಮಂತ್ರಿಯಾಗದಿದ್ದರೆ ಸಾಯೋದ್ರೊಳಗೆ ಉತ್ತರ ಕರ್ನಾಟಕದ ಮುಖ್ಯಮಂತ್ರಿಯಾಗ್ತೇನೆ'': ಉಮೇಶ್‌ ಕತ್ತಿ

ಬಿಜೆಪಿ ನಾಯಕ ಉಮೇಶ್‌ ಕತ್ತಿ ಮತ್ತೆ ಪ್ರತ್ಯೇಕ ರಾಜ್ಯಕ್ಕಾಗಿ ಕತ್ತಿ ಮಸೆದಿದ್ದಾರೆ. ಜತೆಗೆ ನಾನು ಆದ್ರೆ ಸಿಎಂ ಆಗ್ತೇನೆ. ಕರ್ನಾಟಕದ ಸಿಎಂ ಆಗದಿದ್ರೆ ಉತ್ತರ ಕರ್ನಾಟಕದ ಸಿಎಂ ಆದ್ರೂ ಆಗ್ತೇನೆ ಎಂದು ಹೇಳಿಕೊಂಡಿದ್ದಾರೆ.

Vijaya Karnataka Web 18 Oct 2019, 1:57 pm
ಚಿಕ್ಕೋಡಿ: ''ನಾನು ಡಿಸಿಎಂ ಅಲ್ಲ, ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗುತ್ತೇನೆ ಎಂದು ಉಮೇಶ್‌ ಕತ್ತಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಡಿಸಿಎಂ ಹುದ್ದೆಗಳು ಕೇವಲ ನಾಮಕಾವಸ್ಥೆ. ನಾನು ಮುಖ್ಯಮಂತ್ರಿಯಾಗ್ತೇನೆ. ಅದು ಖಂಡಿತ'' ಎಂದು ಚಿಕ್ಕೋಡಿಯಲ್ಲಿ ಸಿಎಂ ಕುರ್ಚಿಗೆ ಕೇಸರಿ ನಾಯಕ ಉಮೇಶ್‌ ಕತ್ತಿ ಟವೆಲ್‌ ಹಾಕಿದ್ದಾರೆ.
Vijaya Karnataka Web umesh katti et


ಸಿಎಂ ಆಗ್ತೀನಿ ಎಂದ ಉಮೇಶ ಕತ್ತಿ ಮಾತಿಗೆ ಡಿಸಿಎಂ ಕಾರಜೋಳ ವ್ಯಂಗ್ಯ

ಅಲ್ಲದೆ, ''ಕರ್ನಾಟಕದ ಮುಖ್ಯಮಂತ್ರಿ ಆಗದಿದ್ದರೆ ಸಾಯೋದ್ರೊಳಗೆ ಉತ್ತರ ಕರ್ನಾಟಕದ ಸಿಎಂ ಆದ್ರೂ ಆಗ್ತೇನೆ. ನಮ್ಮ ಭಾಗಕ್ಕೆ ಸರಿಯಾಗಿ ನೀರು ಕೊಡದಿದ್ದರೆ ಪ್ರತ್ಯೇಕ ರಾಜ್ಯಕ್ಕೆ ಹೋರಾಡಬೇಕಾಗುತ್ತೆ. ಯಾವುದೇ ಸರಕಾರವಿದ್ದರೂ ಸರಿ ಅನ್ಯಾಯವಾದರೆ ಪ್ರತಿಭಟಿಸಬೇಕಾಗುತ್ತೆ. ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುತ್ತೇನೆ'' ಎಂದೂ ಉಮೇಶ್ ಕತ್ತಿ ಮತ್ತೆ ಕತ್ತಿ ಮಸೆದಿದ್ದಾರೆ.

ಹುಡುಗಾಟಿಕೆ ಮಾತು ನಿಲ್ಲಿಸಿ, ಕತ್ತಿಗೆ ಕಾರಜೋಳ ಖಡಕ್‌ ವಾರ್ನಿಂಗ್‌

ಇನ್ನೊಂದೆಡೆ, ನಾನು ಸಿಎಂ ಆಗೋದು ಖಂಡಿತ. ಅಖಂಡ ಕರ್ನಾಟಕದ ಸಿಎಂ ಆಗದಿದ್ರೆ ಸಾಯೋದ್ರೊಳಗೆ ಉತ್ತರ ಕರ್ನಾಟಕ ಸಿಎಂ ಆಗ್ತೇನೆ'' ಎಂದೂ ಹೇಳುವ ಮೂಲಕ ಮುಖ್ಯಮಂತ್ರಿಯಾಗುವ ಆಸೆಯನ್ನು ಬಿಜೆಪಿ ನಾಯಕ ಉಮೇಶ್‌ ಕತ್ತಿ ಮತ್ತೆ ವ್ಯಕ್ತಪಡಿಸಿದ್ದಾರೆ. ಜತೆಗೆ, ''ಮುಂದಿನ ಮಾರ್ಚ್‌ನಲ್ಲಿ ನಡೆಯಲಿರುವ ಬಜೆಟ್‌ ಅಧಿವೇಶನದವರೆಗೆ ನಿರ್ಧಾರ ಮಾಡಲು ಸರಕಾರಕ್ಕೆ ಸಮಯ, ಅವಕಾಶ ನೀಡುತ್ತೇನೆ'' ಎನ್ನುವ ಮೂಲಕ ಬಿಜೆಪಿ ಸರಕಾರಕ್ಕೆ ಕತ್ತಿ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ