ಆ್ಯಪ್ನಗರ

ಸರಕಾರಿ ದಾಖಲೆಗಳ ಅನಧಿಕೃತ ಮುದ್ರಣ: ಅಂಗಡಿಗಳ ಮೇಲೆ ದಾಳಿ

ಸರಕಾರದಿಂದ ಪರವಾನಗಿ ಪಡೆಯದೇ ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ರೇಷನ್‌ ಕಾರ್ಡ್‌ ಸೇರಿದಂತೆ ಇನ್ನಿತರ ದಾಖಲಾತಿಗಳ ಕಲರ್‌ ಪ್ರಿಂಟ್‌ ...

Vijaya Karnataka 10 Feb 2019, 5:00 am
ಬೆಳಗಾವಿ: ಸರಕಾರದಿಂದ ಪರವಾನಗಿ ಪಡೆಯದೇ ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ರೇಷನ್‌ ಕಾರ್ಡ್‌ ಸೇರಿದಂತೆ ಇನ್ನಿತರ ದಾಖಲಾತಿಗಳ ಕಲರ್‌ ಪ್ರಿಂಟ್‌ ತೆಗೆಯುತ್ತಿದ್ದ ಎರಡು ಅಂಗಡಿಗಳ ಮೇಲೆ ಶನಿವಾರ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡು, ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
Vijaya Karnataka Web BEL-9 LBS 1A


ನಗರದ ಕೆಲವು ಅಂಗಡಿಗಳು ಸರಕಾರದ ಪರವಾನಗಿ ಪಡೆಯದೆ ವಿವಿಧ ದಾಖಲಾತಿಗಳ ಕಲರ್‌ ಪ್ರಿಂಟ್‌ ತೆಗೆದು ಹೆಚ್ಚಿನ ಹಣ ಪಡೆಯುತ್ತಿವೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಬೆಳಗಾವಿ ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ತಹಸೀಲ್ದಾರ ಮಂಜುಳಾ ನಾಯಕ ಹಾಗೂ ಸಿಬ್ಬಂದಿ ದಾಳಿ ನಡೆಸಿತು.

ಬೆಳಗಾವಿ ನಗರದಲ್ಲಿ ಆಧಾರ್‌ ಕಾರ್ಡ್‌ ಪ್ರಿಂಟ್‌ ತೆಗೆಯಲು 18 ಅಂಗಡಿಗಳು ಮಾತ್ರ ಪರವಾನಗಿ ಪಡೆದುಕೊಂಡಿವೆ. ಪರವಾನಗಿ ಇಲ್ಲದೆ ದಾಖಲಾತಿಗಳನ್ನು ವಿತರಿಸುವ ಅಂಗಡಿಗಳ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಕವಿತಾ ಯೋಗಪ್ಪನವರ, ಉಪವಿಭಾಗಾಧಿಕಾರಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ