ಆ್ಯಪ್ನಗರ

ಸರಕಾರಿ ಹಾಸ್ಟೆಲ್‌ನಲ್ಲಿ ಅನಧಿಕೃತ ವಿದ್ಯಾರ್ಥಿಗಳು?

ಬೆಳಗಾವಿ: ಇಲ್ಲಿನ ಅಜಮ್‌ ...

Vijaya Karnataka 24 Sep 2018, 5:00 am
ಬೆಳಗಾವಿ: ಇಲ್ಲಿನ ಅಜಮ್‌ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರ ಬಾಲಕರ ವಸತಿ ನಿಲಯದಲ್ಲಿ ಹಳಸಿದ ಅನ್ನ ಬೆರೆಸಿದ ಊಟ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಆ ನಿಯಲದಲ್ಲಿ ಕೆಲವರು ಅನಧಿಕೃತ ವ್ಯಕ್ತಿಗಳು ವಿದ್ಯಾರ್ಥಿಗಳಂತೆ ಉಳಿದುಕೊಂಡಿದ್ದಾರೆ ಎನ್ನುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
Vijaya Karnataka Web BLG-2309-2-52-23PRAMOD1


ಶನಿವಾರ ರಾತ್ರಿ ಬಿಸಿ ಅನ್ನಕ್ಕೆ ಇನ್ನೊಂದು ಪಾತ್ರೆಯ ಅನ್ನ ಬೆರೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಬಿಸಿ ಅನ್ನಕ್ಕೆ ಹಳಸಿದ ಅನ್ನ ಬೆರೆಸಿ ಕೊಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಊಟ ಸೇವಿಸದೆ ಮಧ್ಯ ರಾತ್ರಿವರೆಗೂ ಪ್ರತಿಭಟನೆ ಮಾಡಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬೇರೆ ಅನ್ನ ಮಾಡಿ ಊಟ ಬಡಿಸಲಾಯಿತು.

ಆದರೆ, ವಿದ್ಯಾರ್ಥಿಗಳ ಆರೋಪವನ್ನು ತಳ್ಳಿಹಾಕಿರುವ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ್‌ 'ಕೆಲ ಅನಧಿಕೃತ ವ್ಯಕ್ತಿಗಳು ನಿಲಯದಲ್ಲಿ ವಿದ್ಯಾರ್ಥಿಗಳಂತೆ ಸೇರಿಕೊಂಡು ಉದ್ದೇಶ ಪೂರ್ವಕವಾಗಿ ಗಲಾಟೆ ಎಬ್ಬಿಸಿದ್ದಾರೆ' ವಿಷಯ ಬಾಯಿಬಿಟ್ಟಿದ್ದಾರೆ. ಎಂದು ಹೇಳಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಯೇ ಇಂಥದೊಂದು ವಿಷಯ ಹೇಳುತ್ತಿರುವುದು ವಸತಿ ನಿಲಯದ ಭದ್ರತೆ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡಿದೆ.

ಶನಿವಾರ ರಾತ್ರಿ ಮಧ್ಯಾಹ್ನ ಉಳಿದ ಅನ್ನವನ್ನು ಬಿಸಿ ಅನ್ನಕ್ಕೆ ಬೆರೆಸಲಾಗಿತ್ತು. ಅದನ್ನು ನೋಡಿ ಹಳಸಿದ ಅನ್ನ ಬೆರೆಸುತ್ತಾರೆ ಎಂದು ಕೆಲವರು ಗಲಾಟೆ ಮಾಡಿದ್ದಾರೆ ಅವರು 'ವಿಕ'ಕ್ಕೆ ದೂರವಾಣಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಆ ಅನಧಿಕೃತ ವ್ಯಕ್ತಿಗಳು ಮೊದಲಿನಿಂದಲೂ ವಸತಿ ನಿಯಲದಲ್ಲಿ ಇದ್ದಾರೆ. ವಿದ್ಯಾರ್ಥಿಗಳು, ಅಧಿಕಾರಿಗಳನ್ನು ಬೆದರಿಸಿ ಉಳಿದುಕೊಂಡಿದ್ದಾರೆ. ಈ ಕುರಿತು ಅನೇಕ ಬಾರಿ ಪೊಲೀಸರ ಮಧ್ಯ ಪ್ರವೇಶವೂ ಆಗಿದೆ. ಅವರೆಲ್ಲರನ್ನೂ ನಿಲಯದಿಂದ ಹೊರಹಾಕಲು ಕ್ರಮ ಕೈಗೊಳ್ಳುತ್ತಿದ್ದಂತೆಯೇ ಊಟದ ನೆಪವೊಡ್ಡಿ ಗಲಾಟೆ ಮಾಡಿದ್ದಾರೆ. ಸದ್ಯದಲ್ಲಿಯೇ ಎಲ್ಲ ಅನಧಿಕೃತ ವ್ಯಕ್ತಿಗಳನ್ನು ವಸತಿ ನಿಲಯದಿಂದ ಹೊರಹಾಕುತ್ತೇವೆ ಎಂದು ಅವರು ತಿಳಿಸಿದರು.

ವಸತಿ ನಿಲಯದಲ್ಲಿ ಅನಧಿಕೃತ ವ್ಯಕ್ತಿಗಳು ಸೇರಿಕೊಂಡಿದ್ದಾರೆ. ಅಧಿಕಾರಿಗಳ ಎಚ್ಚರಿಕೆಗೂ ಅವರು ಕ್ಯಾರೇ ಎನ್ನುತ್ತಿಲ್ಲ. ಅವರೆಲ್ಲರನ್ನೂ ಹೊರ ಹಾಕುವಂತೆ ಮುಖ್ಯ ಕಚೇರಿಯಿಂದ ಆದೇಶ ಬಂದಿದೆ. ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ.
- ಉಮಾ ಸಾಲಿಗೌಡರ್‌, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ