ಆ್ಯಪ್ನಗರ

ಅಪರಿಚಿತ ವಾಹನ ಬಡಿದು ಲಾರಿ ಚಾಲಕ ಸಾವು

ಖಡಕಲಾಟ: ಸಮೀಪದ ಯಮಗರ್ಣಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ...

Vijaya Karnataka 31 Jul 2019, 5:00 am
ಖಡಕಲಾಟ: ಸಮೀಪದ ಯಮಗರ್ಣಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಹಾಯ್ದ ಪರಿಣಾಮ ಲಾರಿ ಚಾಲಕರೊಬ್ಬರು ಮೃತಪಟ್ಟಿದ್ದಾರೆ.
Vijaya Karnataka Web unidentified vehicle collide lorry drivers death
ಅಪರಿಚಿತ ವಾಹನ ಬಡಿದು ಲಾರಿ ಚಾಲಕ ಸಾವು


ಗುಜರಾತ ರಾಜ್ಯದ ಗೋಧ್ರಾ ಜಿಲ್ಲೆಯ ಖಾಡಿಫಲಿಯಾ ಗ್ರಾಮದ ದೀಪಕಕುಮಾರ ಅಲಿಯಾಸ್‌ ರಘು ಮೋಹನಭಾಯಿ ಚಾವಡಾ(24) ಮೃತಪಟ್ಟವರು.

ಯಮಗರ್ಣಿ ವ್ಯಾಪ್ತಿಯ ಧಾಬಾ ಒಂದರ ಬಳಿ ಹೆದ್ದಾರಿ ದಾಟುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ದೀಪಕಕುಮಾರ ಅವರು ಸಹ ಚಾಲಕ, ಗುಜರಾತ ರಾಜ್ಯದ ದಾನೋಡ ಜಿಲ್ಲೆಯ ದಿಗೆಡವಾರಿಯ ಹಮೀದ್‌ ಅಮೀನ್‌ಖಾನ ಪಠಾಣ ಜತೆ ಗುಜರಾತದಿಂದ ಲಾರಿಯಲ್ಲಿ ಬೆಂಗಳೂರಿಗೆ ಗಾಜುಗಳನ್ನು ಸಾಗಿಸುತ್ತಿದ್ದರು. ಸೋಮವಾರ ಮಧ್ಯರಾತ್ರಿ ಊಟಕ್ಕಾಗಿ ಧಾಬಾ ಬಳಿ ಲಾರಿ ನಿಲ್ಲಿಸಿದ್ದರು. ನಂತರ ವಾಹನದಲ್ಲೇ ಮಲಗಿದ್ದರು.

ಮಂಗಳವಾರ ನಸುಕಿನ ಜಾವದಲ್ಲಿ ಬಹಿರ್ದೆಸೆಗೆಂದು ದೀಪಕ್‌ ರಸ್ತೆ ದಾಟುವಾಗ ಬೇರೊಂದು ವಾಹನ ವೇಗವಾಗಿ ಬಂದು ಅವರ ಮೇಲೆ ಹಾಯ್ದು ಅವರು ಸ್ಥಳದಲ್ಲೇ ಅಸುನೀಗಿದರು. ಬಸವೇಶ್ವರ ಚೌಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ