ಆ್ಯಪ್ನಗರ

ರಾಮ ಮಂದಿರಕ್ಕಾಗಿ ಒಗ್ಗಟ್ಟಾಗಿ

ಬೆಳಗಾವಿ: ಸಾಧು ಸಂತರೊಂದಿಗೆ ಹಿಂದೂ ಸಂಗ್ರಾಮದಲ್ಲಿ ಭಾಗಿಯಾಗಲು ತಾವು ಸದಾ ಸಿದ್ಧ ಎಂದು ...

Vijaya Karnataka 30 Nov 2018, 5:00 am
ಬೆಳಗಾವಿ : ಸಾಧು ಸಂತರೊಂದಿಗೆ ಹಿಂದೂ ಸಂಗ್ರಾಮದಲ್ಲಿ ಭಾಗಿಯಾಗಲು ತಾವು ಸದಾ ಸಿದ್ಧ ಎಂದು ಸಿದ್ಧನಕೊಳ್ಳದ ಗಂಗಾಧರ ಸ್ವಾಮೀಜಿ ಹೇಳಿದರು.
Vijaya Karnataka Web BLG-2911-2-52-29PRAMOD2


ನಗರದ ಸಂಭಾಜಿ ಉದ್ಯಾನವನದಲ್ಲಿ ಗುರುವಾರ ಆಯೋಜಿಸಿದ್ದ ಶೋಭಾಯಾತ್ರೆ ಹಾಗೂ ಜನಾಗ್ರಹ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ''ನಮಗೆ ಮತ ನೀಡುವ ಹಕ್ಕು ಇದೆ. ಆದರೆ, ಶಾಸನ ಬರೆಯುವ ಅಧಿಕಾರ ಇಲ್ಲ. ಹಾಗಾಗಿ ಎಲ್ಲ ಸಾಧು, ಸಂತರನ್ನು ಆಹ್ವಾನಿಸಿದರೆ ನಾವೂ ಆ ಸಂಗ್ರಾಮದಲ್ಲಿ ಪಾಲ್ಗೊಳ್ಳುತ್ತೇವೆ'', ಎಂದರು.

''ಒಗ್ಗಟಿನಲ್ಲಿ ಬಲವಿದೆ ಎನ್ನುವುದನ್ನು ತೋರಿಸುವ ಸಮಯ ಬಂದಿದೆ. ರಾಮ ಮಂದಿರ ಕಟ್ಟುವ ಶಕ್ತಿ ನಮ್ಮಲಿದೆ. ಅದಕ್ಕಾಗಿ ಹಿಂದೂ ಸಮುದಾಯದ ಎಲ್ಲ ತರುಣರು ಈ ಕಾರ್ಯದಲ್ಲಿ ಭಾಗಿಯಾಗಬೇಕು'', ಎಂದು ಸಲಹೆ ನೀಡಿದರು.

ಬಾಪಟಗಲ್ಲಿಯ ನಾಗನಾಥ ಸ್ವಾಮೀಜಿ, ''ರಾಮಾಯಣ ನಡೆಯಲು ಮಂಥರೆ ಕಾರಣವಾದ ರೀತಿ ರಾಮ ಮಂದಿರ ಕಟ್ಟುವುದನ್ನು ತಡೆಯಲು ಈಗಿನ ಕಲಿಯುಗದಲ್ಲೂ ಮಂಥರೆಯರಿದ್ದಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ನಾವೆಲ್ಲರೂ ಒಂದು ಎನ್ನುವುದನ್ನು ಸಾಬೀತು ಮಾಡಬೇಕಾಗಿದೆ'', ಎಂದರು.

ವಿಶ್ವ ಹಿಂದೂ ಪರಿಷತ್‌ ಸಹ ಕೋಶಾಧ್ಯಕ್ಷ ಕೃಷ್ಣ ಭಟ್ಟ ಮಾತನಾಡಿದರು. ಶ್ರೀಕಾಂತ ಕದಂಬ, ಮಲ್ಲಿಕಾರ್ಜುನ ಜಗಜಂಪಿ, ಸತೀಶ ಮಾಳೊದೆ, ವಿಜಯ ಜಾಧವ, ಹೇಮಂತ ಹವರ, ಮಧು ನಾಯಕ, ಬಸವರಾಜ ಹೊಳಂಗಳಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ