ರಾಮದುರ್ಗ: ತಾಲೂಕಿನ ಮುಳ್ಳೂರು ಗುಡ್ಡದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಶವ ಸಂಪೂರ್ಣ ಕೊಳೆತುಹೋಗಿದ್ದು, ಕಾಡು ಪ್ರಾಣಿಗಳು ತಿಂದಿದ್ದರಿಂದ ತಲೆಬುರುಡೆ ಹಾಗೂ ಅಸ್ಥಿಪಂಜರ ಮಾತ್ರ ಉಳಿದುಕೊಂಡಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುಮಾರು 45 ರಿಂದ 50ರ ವಯೋಮಾನ ಪುರುಷನ ಶವವೆಂದು ಗುರುತಿಸಲಾಗಿದ್ದು, ಬಿಳಿ ಬಣ್ಣದ ಶರ್ಟ್, ದೋತಿ, ಗಾಂಧಿ ಟೋಪಿ, ಚಾಕಲೇಟ್ ಬಣ್ಣದ ನಿಕ್ಕರ್, ಹಸಿರು ಬಣ್ಣ ಉಡದಾರ, ಕಪ್ಪು ಬಣ್ಣದ ಚಪ್ಪಲಿ ಪತ್ತೆಯಾಗಿದೆ. ಸ್ಥಳದಲ್ಲಿ ಮದ್ಯದ ಬಾಟಲ್ ಹಾಗೂ ಕ್ರಿಮಿನಾಶಕ ಔಷಧ ಬಾಟಲ್ ಪತ್ತೆಯಾಗಿವೆ. ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಯ ಶವ ಪತ್ತೆ
ತಾಲೂಕಿನ ಮುಳ್ಳೂರು ಗುಡ್ಡದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ...
Vijaya Karnataka 27 Jan 2019, 5:00 am