ಆ್ಯಪ್ನಗರ

ಸೆಪ್ಟಂಬರ್‌ನಿಂದ ಶಾಲೆ ಆರಂಭಿಸಲು ಆಗ್ರಹ

ಬೆಳಗಾವಿ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಜೂನ್ ...

Vijaya Karnataka 29 May 2020, 5:00 am
ಬೆಳಗಾವಿ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಜೂನ್‌ ಬದಲಿಗೆ ಸೆಪ್ಟಂಬರ್‌ ತಿಂಗಳಿನಿಂದ ಆರಂಭಿಸಬೇಕೆಂದು ಆಗ್ರಹಿಸಿ ನಗರದ ಸಿಟಿಜನ್‌ ಕೌನ್ಸಿಲ್‌ದವರು ಜಿಲ್ಲಾಧಿಕಾರಿ ಮತ್ತು ಕಾರ್ಯದರ್ಶಿ ಹಾಗೂ ಪದನಿಮಿತ್ತ ನಿರ್ದೇಶಕರು ಪ್ರೌಢಶಿಕ್ಷಣ ಇಲಾಖೆಯ ಎಂ.ಎಸ್‌. ಪ್ರಸನ್ನಕುಮಾರ ಅವರ ಮೂಲಕ ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
Vijaya Karnataka Web 28RAJU-5085500
ಶಾಲೆಗಳನ್ನು ಸೆಪ್ಟಂಬರ್‌ನಿಂದ ಆರಂಭಿಸಲು ಆಗ್ರಹಿಸಿ ಸಿಟಿಜನ್‌ ಕೌನ್ಸಿಲ್‌ನಿಂದ ಜಿಲ್ಲಾಧಿಕಾರಿ ಮತ್ತು ಶಿಕ್ಷಣ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.


ಕೊರೊನಾ ಹಾವಳಿ ಎಲ್ಲಕಡೆಗೆ ಇದೆ. ಮಕ್ಕಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ತಿಳಿಯುವುದಿಲ್ಲ. ಇನ್ನು ಮಳೆಗಾಲ ಆರಂಭವಾಗುವುದರಿಂದ ಸ್ಕೂಲ್‌ ಬಸ್‌ ಮತ್ತು ಆಟೋದಲ್ಲಿಸಂಚರಿಸುವುದು ಕಷ್ಟಕರ. ಈ ಅವಧಿಯಲ್ಲಿನೆಗಡಿ, ಕೆಮ್ಮಿನಂಥ ಕಾಯಿಲೆಗಳು ಇರುತ್ತವೆ. ಹೀಗಾಗಿ ಸೆಪ್ಟಂಬರ್‌ನಿಂದಲೇ ಆರಂಭಿಸಬೇಕೆಂದು ವಿನಂತಿಸಿದ್ದಾರೆ. ಸಂಘಟನೆಯ ಅಧ್ಯಕ್ಷ ಸತೀಶ್‌ ತೆಂಡೂಲ್ಕರ್‌, ನ್ಯಾಯವಾದಿ ಎನ್‌.ಆರ್‌. ಲಾತೂರ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ