ಆ್ಯಪ್ನಗರ

ಶಾಲೆ ಆವರಣ ಗೋಡೆ ನಿರ್ಮಿಸಲು ಆಗ್ರಹ

ಮೂಡಲಗಿ: ಸಮೀಪದ ಧರ್ಮಟ್ಟಿ ಗ್ರಾಪಂ ವ್ಯಾಪ್ತಿಗೆ ಬರುವ ಹೊಸನಗರ ಹಾಗೂ ಉಪವೀರ ತೋಟದ ಶಾಲೆ ಮತ್ತು ಅಂಗನವಾಡಿಗಳ ಮಕ್ಕಳ ಸುರಕ್ಷ ತೆ ದೃಷ್ಟಿಯಿಂದ ಶಾಲೆಗೆ ಆವರಣ ...

Vijaya Karnataka 1 Feb 2019, 5:00 am
ಮೂಡಲಗಿ : ಸಮೀಪದ ಧರ್ಮಟ್ಟಿ ಗ್ರಾಪಂ ವ್ಯಾಪ್ತಿಗೆ ಬರುವ ಹೊಸನಗರ ಹಾಗೂ ಉಪವೀರ ತೋಟದ ಶಾಲೆ ಮತ್ತು ಅಂಗನವಾಡಿಗಳ ಮಕ್ಕಳ ಸುರಕ್ಷ ತೆ ದೃಷ್ಟಿಯಿಂದ ಶಾಲೆಗೆ ಆವರಣ ಗೋಡೆಯನ್ನು ನಿರ್ಮಿಸಲು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ತಾಲೂಕಾಧ್ಯಕ್ಷ ಸಚಿನ ಲಂಕೆನ್ನವರ ನೇತೃತ್ವದಲ್ಲಿ ಧರ್ಮಟ್ಟಿ ಗ್ರಾಪಂ ಅಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
Vijaya Karnataka Web BEL-31MDL4


ಉಪವೀರ ತೋಟದ ಶಾಲೆ ಮತ್ತು ಅಂಗನವಾಡಿಗಳು ಮೂಡಲಗಿ ಮತ್ತು ಧರ್ಮಟ್ಟಿ ಮಾರ್ಗದ ರಸ್ತೆಗೆ ಹೊಂದಿಕೊಂಡಿದೆ. ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಆದ್ದರಿಂದ ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳು ತಕ್ಷ ಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಮಹಾಂತೇಶ ಮುಗಳಖೋಡ, ಶಾನೂರ ಕುರಬೇಟ, ಇನ್ನೂಸ ನಾಗರಾಳ, ಅಜಿತ ಕಂಕನವಾಡಿ, ರಾಹುಲ ಶಿಂಧೆ, ಸಾಗರ ಢವಳೇಶ್ವರ, ಕರೆಪ್ಪಾ ಹೊನಕುಪ್ಪಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ