ಆ್ಯಪ್ನಗರ

ವಿಕಲಚೇತನ ವಿದ್ಯಾರ್ಥಿಯ ನೆರವಿಗೆ ಮನವಿ

ಬೈಲಹೊಂಗಲ: ಎರಡೂ ಕೈಗಳಿಲ್ಲದೆ ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ಬೈಲಹೊಂಗಲ ತಾಲೂಕಿನ ಹನಮರಟ್ಟಿ ಗ್ರಾಮದ ನಿವಾಸಿ, 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕಿರಣ ...

Vijaya Karnataka 14 Jul 2019, 5:00 am
ಬೈಲಹೊಂಗಲ : ಎರಡೂ ಕೈಗಳಿಲ್ಲದೆ ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ಬೈಲಹೊಂಗಲ ತಾಲೂಕಿನ ಹನಮರಟ್ಟಿ ಗ್ರಾಮದ ನಿವಾಸಿ, 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕಿರಣ ಫಕ್ಕೀರಪ್ಪಾ ಕ್ಯಾಮನಕೋಲನ ಶಿಕ್ಷಣ ಹಾಗೂ ಭವಿಷ್ಯಕ್ಕಾಗಿ ಬೈಲಹೊಂಗಲ ಮತ್ತು ಚನ್ನಮ್ಮನ ಕಿತ್ತೂರಿನ ಶಾಸಕರು, ತಾಲೂಕಾಡಳಿತ, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಶಾಸಕರು ಧನಸಹಾಯ ಮಾಡಿ ನೆರವು ನೀಡಬೇಕು ಎಂದು ಅಂಬೇಡ್ಕರ್‌ ಯುವ ಸೇನೆಯ ಜಿಲ್ಲಾಧ್ಯಕ್ಷ ಅರ್ಜುನ ಬಂಡಿ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.
Vijaya Karnataka Web BEL-13HTP2    KIRAN KAMANKOL


ಎರಡೂ ಕೈಗಳಿಲ್ಲದಿದ್ದರೂ ಮೊಣಕೈ ಸಹಾಯದಿಂದ ತನ್ನ ದಿನನಿತ್ಯದ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುವ ಕಿರಣ ಬಡತನದಲ್ಲೂ ಅಂಗವೈಕಲ್ಯತೆಗೆ ಸೆಡ್ಡು ಹೊಡೆದು ಬದುಕುತ್ತಿದ್ದಾನೆ. ಈ ಬಾಲಕನಿಗೆ ಕೃತಕ ಕೈ ಜೋಡನೆ ಮಾಡಿ ಉಜ್ವಲ ಭವಿಷ್ಯ ರೂಪಿಸಲು ಪ್ರತಿಯೊಬ್ಬರೂ ಧನ ಸಹಾಯ ಮಾಡಲು ಮುಂದಾಗುವಂತೆ ಅವರು ಕೋರಿದ್ದಾರೆ.

ಧನ ಸಹಾಯ ಮಾಡಲು ಇಚ್ಛಿಸುವವರು
ಹೆಸರು: ಕಿರಣ ಫಕ್ಕೀರಪ್ಪ ಕ್ಯಾಮನಕೋಲ
ಸಿಂಡಿಕೇಟ್‌ ಬ್ಯಾಂಕ್‌ ಖಾತೆ ಸಂಖ್ಯೆ: 05252210061410
ಐಎಫ್‌ಎಸ್‌ಸಿ ನಂ. ಖ್ಗNಆ 0000525
ಈ ಖಾತೆಗೆ ಧನ ಜಮಾ ಮಾಡಬೇಕೆಂದು ಅಂಬೇಡ್ಕರ್‌ ಯುವ ಸೇನೆ ಜಿಲ್ಲಾಧ್ಯಕ್ಷ ಅರ್ಜುನ ಬಂಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ