ಎಂ.ಕೆ.ಹುಬ್ಬಳ್ಳಿ : ತಮಗೆ 23 ತಿಂಗಳುಗಳಿಂದ ವೇತನ ನೀಡಿಲ್ಲ. ಶೀಘ್ರವೇ ವೇತನ ನೀಡಲು ಕ್ರಮ ಕೈಗೊಂಡು ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಪಪಂ ಪೌರ ಕಾರ್ಮಿಕರು ಪಪಂ ಸಮುದಾಯ ಸಂಘಟನಾಧಿಕಾರಿ ಎ.ಎಸ್. ಶೆಟ್ಟರ ಅವರಿಗೆ ಮನವಿ ಸಲ್ಲಿಸಿದರು.
''ವೇತನ ಇಲ್ಲದೇ ಜೀವನ ಸಾಗಿಸುವುದು ಕಷ್ಟವಾಗಿದೆ. ಈ ಹಿಂದೆ ಬೆಳಗಾವಿ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ಇದನ್ನು ಗಮನಕ್ಕೆ ತಂದಿದ್ದೆವು. ಐದು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಹೋದವರು ಇದುವರೆಗೂ ಸಮಸ್ಯೆಗೆ ಸ್ಪಂದಿಸಿಲ್ಲ. ವೇತನ ನೀಡಿ ಸೇವೆಯನ್ನು ಕಾಯಂಗೊಳಿಸುವವರೆಗೆ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ,'' ಎಂದು ಪ್ರತಿಭಟನಾಕಾರರು ಹೇಳಿದರು. ಪೌರ ಕಾರ್ಮಿಕರಾದ ಮಲ್ಲಿಕಾರ್ಜುನ ತಿಗಡಿ, ರಾಜು ಮಾದರ, ದೇಮಪ್ಪ ಜೋತಗನ್ನವರ, ಸಂಜೀವ ಕೋಲಕಾರ, ಶೆಟ್ಟೆಪ್ಪ ಕೋಲಕಾರ ಮತ್ತಿತರರು ಇದ್ದರು.
''ವೇತನ ಇಲ್ಲದೇ ಜೀವನ ಸಾಗಿಸುವುದು ಕಷ್ಟವಾಗಿದೆ. ಈ ಹಿಂದೆ ಬೆಳಗಾವಿ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ಇದನ್ನು ಗಮನಕ್ಕೆ ತಂದಿದ್ದೆವು. ಐದು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಹೋದವರು ಇದುವರೆಗೂ ಸಮಸ್ಯೆಗೆ ಸ್ಪಂದಿಸಿಲ್ಲ. ವೇತನ ನೀಡಿ ಸೇವೆಯನ್ನು ಕಾಯಂಗೊಳಿಸುವವರೆಗೆ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ,'' ಎಂದು ಪ್ರತಿಭಟನಾಕಾರರು ಹೇಳಿದರು. ಪೌರ ಕಾರ್ಮಿಕರಾದ ಮಲ್ಲಿಕಾರ್ಜುನ ತಿಗಡಿ, ರಾಜು ಮಾದರ, ದೇಮಪ್ಪ ಜೋತಗನ್ನವರ, ಸಂಜೀವ ಕೋಲಕಾರ, ಶೆಟ್ಟೆಪ್ಪ ಕೋಲಕಾರ ಮತ್ತಿತರರು ಇದ್ದರು.