ಆ್ಯಪ್ನಗರ

ವಾಹನ ಮರಕ್ಕೆ ಡಿಕ್ಕಿ; ಹಲವರಿಗೆ ಗಾಯ

ಹುಕ್ಕೇರಿ: ತಾಲೂಕಿನ ಜಿನರಾಳ ಕ್ರಾಸ ಹತ್ತಿರ ಕ್ರೂಸರ್‌ ವಾಹನ ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 15 ಜನ ಜೈನ ...

Vijaya Karnataka 12 Jul 2019, 5:00 am
ಹುಕ್ಕೇರಿ : ತಾಲೂಕಿನ ಜಿನರಾಳ ಕ್ರಾಸ ಹತ್ತಿರ ಕ್ರೂಸರ್‌ ವಾಹನ ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 15 ಜನ ಜೈನ ಶ್ರಾವಕಿಯರು ಗಾಯಗೊಂಡಿದ್ದಾರೆ.
Vijaya Karnataka Web BEL-11 HUKKERI 03 A


ತಾಲೂಕಿನ ಯರನಾಳ ಗ್ರಾಮದಲ್ಲಿ ಜರುಗುತ್ತಿರುವ ಚಾತುರ್ಮಾಸದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರಾವಕ-ಶ್ರಾವಕಿಯರು ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಕೆಲವರಿಗೆ ಕೈಕಾಲು ಮೂಳೆ ಮುರಿದಿವೆ ಎನ್ನಲಾಗಿದೆ.

ಅಪಘಾತ ಸಂಭವಿಸಿದಾಗ ಸ್ಥಳದಲ್ಲಿದ್ದ ರಾಜು ಖೇಮಲಾಪುರೆ, ಅಶೋಕ ಖೇಮಲಾಪುರೆ, ಭರತೇಶ ಹಾಲಕರ್ಣಿ, ರಾಹುಲ್‌ ಖೇಮಲಾಪುರೆ ಸೇರಿ ಕೆಲ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿದ್ದು ಯಮಕಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ