ಆ್ಯಪ್ನಗರ

ವಾಹನ ಡಿಕ್ಕಿ; ಪಾದಚಾರಿ ಸಾವು

ಗೋಕಾಕ: ಅಪರಿಚಿತ ವಾಹನವೊಂದು ಪಾದಚಾರಿಗೆ ...

Vijaya Karnataka 6 Nov 2019, 5:00 am
ಗೋಕಾಕ: ಅಪರಿಚಿತ ವಾಹನವೊಂದು ಪಾದಚಾರಿಗೆ ಹಿಂದಿನಿಂದ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಭಾನುವಾರ ರಾತ್ರಿ ನಗರ ಹೊರವಲಯದ ಕಡಬಗಟ್ಟಿ ಗುಡ್ಡದ ರಸ್ತೆಯಲ್ಲಿಸಂಭವಿಸಿದೆ.
Vijaya Karnataka Web vehicle collision the death of a pedestrian
ವಾಹನ ಡಿಕ್ಕಿ; ಪಾದಚಾರಿ ಸಾವು


ಮೃತನನ್ನು ಕಡಬಗಟ್ಟಿ ಗ್ರಾಮದ ನಿವಾಸಿ ಅವ್ವಣ್ಣ ಲಕ್ಷತ್ರ್ಮಣ ದಡ್ಡಿಹಳ್ಳಿ (22) ಎಂದು ಗುರುತಿಸಲಾಗಿದೆ. ವಾಹನ ಸವಾರ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದಾನೆ.

ಬಾವಿಯಲ್ಲಿಶವ ಪತ್ತೆ:
ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವನ ಶವ ತಾಲೂಕಿನ ಕೇಸಪ್ಪನಟ್ಟಿ ಗ್ರಾಮ ಹೊರವಲಯದ ತೋಟದ ಬಾವಿಯಲ್ಲಿಪತ್ತೆಯಾಗಿದೆ.

ಮೃತನನ್ನು ಅದೇ ಗ್ರಾಮದ ಭರಮಪ್ಪ ಅಜ್ಜಪ್ಪ ದೊಡ್ಡಣ್ಣವರ (35) ಎಂದು ಗುರುತಿಸಲಾಗಿದೆ. ಈತ ನ. 1ರಂದು ಮನೆಯಿಂದ ಹೋದವ ಮರಳಿ ಬಂದಿರಲಿಲ್ಲಎನ್ನಲಾಗಿದೆ.

ನೇಣಿಗೆ ಶರಣು:
ಮನೆಯಲ್ಲಿಯಾರೂ ಇಲ್ಲದ ಸಮಯದಲ್ಲಿವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಗಿಳಿಹೊಸೂರ ಗ್ರಾಮದಲ್ಲಿಭಾನುವಾರ ಸಂಭವಿಸಿದೆ. ಮೃತನನ್ನು ಅದೇ ಗ್ರಾಮದ ನಿವಾಸಿ ಸಣ್ಣಭೀಮಪ್ಪ ಸಿದ್ರಾಯಪ್ಪ ಡಬ್ಬನವರ (35) ಎಂದು ಗುರುತಿಸಲಾಗಿದೆ.

ವಿಷ ಸೇವಿಸಿ ಸಾವು:
ಫಿಟ್ಸ್‌ (ಮಲರೋಗ) ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾದ ವ್ಯಕ್ತಿ ಕ್ರಿಮಿನಾಶಕ ಸೇವಿಸಿ ತನ್ನ ಜಮೀನಿನಲ್ಲಿಸಾವನ್ನಪ್ಪಿದ ಘಟನೆ ತಾಲೂಕಿನ ಕೊಣ್ಣೂರ-ಶಿವಾಪೂರ ಗ್ರಾಮ ವ್ಯಾಪ್ತಿಯಲ್ಲಿಭಾನುವಾರ ಸಂಜೆ ನಡೆದಿದೆ. ಮೃತನನ್ನು ಅದೇ ಗ್ರಾಮದ ನಿವಾಸಿ ರಮೇಶ ಬಸವಣ್ಣಿ ಕಬಾಡಗಿ (33) ಎಂದು ಗುರುತಿಸಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ