ಆ್ಯಪ್ನಗರ

ಖಾನಾಪುರದಲ್ಲಿ ವಿಜಯೋತ್ಸವ ಆಚರಣೆ

ಖಾನಾಪುರ: ಭಾನುವಾರ ನಡೆದ ಬೆಳಗಾವಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ಖಾನಾಪುರ ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ...

Vijaya Karnataka 29 Apr 2019, 5:00 am
ಖಾನಾಪುರ : ಭಾನುವಾರ ನಡೆದ ಬೆಳಗಾವಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ಖಾನಾಪುರ ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಕಾಶ ಯಲ್ಲಪ್ಪ ಅಂಬೋಜಿ ಗೆಲುವು ಸಾಧಿಸಿದ್ದು, ಬೆಂಬಲಿಗರ ಜತೆ ವಿಜಯೋತ್ಸವ ಆಚರಿಸಿದರು.
Vijaya Karnataka Web BEL-28KHANAPUR2


ಚಲಾವಣೆಯಾದ 56 ಮತಗಳ ಪೈಕಿ ಪ್ರಕಾಶ 48 ಮತಗಳನ್ನು ಪಡೆದು ಬಹುಮತದಿಂದ ಜಯ ಗಳಿಸಿದ್ದಾರೆ ಎಂದು ಮಾಜಿ ಶಾಸಕ ಅರವಿಂದ ಪಾಟೀಲ ಹೇಳಿದ್ದಾರೆ.

ಪ್ರಕಾಶ ಗೆಲುವಿಗೆ ಬಿಜೆಪಿ ಮುಖಂಡರಾದ ಬಾಬಣ್ಣ ಪಾಟೀಲ, ಪ್ರಮೋದ ಕೊಚೇರಿ, ವಿಠಲ ಹಲಗೇಕರ, ವಿಠಲ ಪಾಟೀಲ, ವಿವೇಕಾನಂದ ಭರಮಪ್ಪನವರ, ನಾಗೇಂದ್ರ ಚೌಗುಲಾ, ರಾಯಪ್ಪ ಚಲವಾದಿ, ಸಂತೋಷ ಹಡಪದ, ಸುರೇಶ ಮ್ಯಾಗೇರಿ ಮತ್ತಿತರರು ಸಂತಸ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಕಾಂಗ್ರೆಸ್‌ ಪಕ್ಷ ಹೊರತುಪಡಿಸಿ ಬಿಜೆಪಿ, ಎಂಇಎಸ್‌, ಜೆಡಿಎಸ್‌, ಶಿವಸೇನೆ ಮತ್ತಿತರ ಪಕ್ಷ ಗಳು ಬೆಂಬಲ ವ್ಯಕ್ತಪಡಿಸಿದ್ದರಿಂದ ಪ್ರಕಾಶ ಬಹುಮತದಿಂದ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ