ಐನಾಪುರ : ಅಥಣಿ, ಕಾಗವಾಡ ತಾಲೂಕಿನ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಪ್ರವಾಹ ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ತಾಲೂಕಿನಲ್ಲಿ ಹಲವಾರು ಗ್ರಾಮಗಳ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿವೆ. ಐನಾಪುರ ಪಟ್ಟಣದಿಂದ 5 ಕಿಮೀ ದೂರದಲ್ಲಿರುವ ಪುಟ್ಟಗ್ರಾಮ ಬಣಜವಾಡ ಕೃಷ್ಣಾ ಹಾಗೂ ಉಪನದಿಗಳ ರೌದ್ರಾವತಾರಕ್ಕೆ ಸಂಪೂರ್ಣ ಜಲಾವೃತವಾಗಿದ್ದು ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
ನದಿ ತಟದಲ್ಲಿರುವ ಗ್ರಾಮಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ತಾಲೂಕು ಆಡಳಿತ ನಡೆಸುತ್ತಿದೆ. ನದಿ ನೀರಿನೊಂದಿಗೆ ಬರುತ್ತಿರುವ ಮೊಸಳೆ, ಹಾವು, ಚೇಳುಗಳಿಂದ ಜನ ಭಯಭೀತರಾಗಿದ್ದಾರೆ.
ಪ್ರವಾಹದಿಂದ ನದಿ ತೀರದ ರೈತರ ಹೊಲಗದ್ದೆಗಳಲ್ಲಿ ನೀರು ನುಗ್ಗಿ ಗೋವಿನ ಜೋಳ, ಸೋಯಾ, ಅವರೆ, ಕಬ್ಬು ನೀರಿನಿಂದ ಜಲಾವೃತಗೋಂಡಿದೆ.
ನದಿ ತೀರದ ಗ್ರಾಮಗಳಾದ ಬಣಜವಾಡ,ಕಿತ್ತೂರ, ಕಾತ್ರಾಳ ಮುಂತಾದ ಗ್ರಾಮಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಜನ-ಜಾನುವಾರುಗಳನ್ನು ಎನ್ಡಿಆರ್ಎಫ್ ಮತ್ತು ಸೇನಾ ಪಡೆಯ ಯೋಧರು ಬೋಟ್ಗಳ ಮುಖಾಂತರ ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದಾರೆ.
ತಾಲೂಕಿನಲ್ಲಿ ಹಲವಾರು ಗ್ರಾಮಗಳ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿವೆ. ಐನಾಪುರ ಪಟ್ಟಣದಿಂದ 5 ಕಿಮೀ ದೂರದಲ್ಲಿರುವ ಪುಟ್ಟಗ್ರಾಮ ಬಣಜವಾಡ ಕೃಷ್ಣಾ ಹಾಗೂ ಉಪನದಿಗಳ ರೌದ್ರಾವತಾರಕ್ಕೆ ಸಂಪೂರ್ಣ ಜಲಾವೃತವಾಗಿದ್ದು ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
ನದಿ ತಟದಲ್ಲಿರುವ ಗ್ರಾಮಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ತಾಲೂಕು ಆಡಳಿತ ನಡೆಸುತ್ತಿದೆ. ನದಿ ನೀರಿನೊಂದಿಗೆ ಬರುತ್ತಿರುವ ಮೊಸಳೆ, ಹಾವು, ಚೇಳುಗಳಿಂದ ಜನ ಭಯಭೀತರಾಗಿದ್ದಾರೆ.
ಪ್ರವಾಹದಿಂದ ನದಿ ತೀರದ ರೈತರ ಹೊಲಗದ್ದೆಗಳಲ್ಲಿ ನೀರು ನುಗ್ಗಿ ಗೋವಿನ ಜೋಳ, ಸೋಯಾ, ಅವರೆ, ಕಬ್ಬು ನೀರಿನಿಂದ ಜಲಾವೃತಗೋಂಡಿದೆ.
ನದಿ ತೀರದ ಗ್ರಾಮಗಳಾದ ಬಣಜವಾಡ,ಕಿತ್ತೂರ, ಕಾತ್ರಾಳ ಮುಂತಾದ ಗ್ರಾಮಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಜನ-ಜಾನುವಾರುಗಳನ್ನು ಎನ್ಡಿಆರ್ಎಫ್ ಮತ್ತು ಸೇನಾ ಪಡೆಯ ಯೋಧರು ಬೋಟ್ಗಳ ಮುಖಾಂತರ ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದಾರೆ.