ಆ್ಯಪ್ನಗರ

ಮುಗಳಖೋಡ ಪುರಸಭೆಯಿಂದ ಕಾರ್ಮಿಕ ಕಾಯ್ದೆ ಉಲ್ಲಂಘನೆ

ಮುಗಳಖೋಡ: ಪಟ್ಟಣದ ಪುರಸಭೆಯಲ್ಲಿ ಕಳೆದ 2 ವರ್ಷಗಳಿಂದ 4 ಪೌರ ಕಾರ್ಮಿರಿಗೆ ಸಂಬಳ ನೀಡದೆ ಕೆಲಸ ...

Vijaya Karnataka 22 Aug 2018, 5:00 am
ಮುಗಳಖೋಡ: ಪಟ್ಟಣದ ಪುರಸಭೆಯಲ್ಲಿ ಕಳೆದ 2 ವರ್ಷಗಳಿಂದ 4 ಪೌರ ಕಾರ್ಮಿರಿಗೆ ಸಂಬಳ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿರುವುದು ಅಮಾನವೀಯ ಮತ್ತು ಕಾರ್ಮಿಕ ಕಾಯ್ದೆಗೆ ವಿರುದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ಮುನ್ಸಿಪಲ್‌ ಕಾರ್ಮಿಕರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ಕಾಂಬಳೆ ಹೇಳಿದರು.
Vijaya Karnataka Web BEL-21MGKD PHOTO1


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಗಳಖೋಡ ಪುರಸಭೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕಾರ್ಯನಿರ್ವಹಿಸುತ್ತಿರುವ 3 ಜನರಿಗೆ 9 ತಿಂಗಳಿನಿಂದ ವೇತನ ನೀಡಿಲ್ಲ. ಕಳೆದ 2 ವರ್ಷಗಳಿಂದ ಪೌರ ಕಾರ್ಮಿಕರ ಕೆಲಸ ಮಾಡುತ್ತಿರುವ 4 ಜನರಿಗೆ ಸಂಬಳ ನೀಡಿಲ್ಲ. ಅವರ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದರು.

ಕಾರ್ಮಿಕ ಕಾಯ್ದೆ ಪ್ರಕಾರ 240 ದಿನಗಳು ಮೀರಿ ಕೆಲಸ ಮಾಡಿಸಿಕೊಂಡರೆ ಅದು ಅಕ್ಷ ಮ್ಯ ಅಪರಾಧ. ಈ ಹಿಂದಿನ ಮುಖ್ಯಾಧಿಕಾರಿಗಳು ಅದನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸಿರುವುದು ಕಾನೂನು ಬಾಹೀರ ಕ್ರಮ ಎಂದರು.

ಕಾರ್ಮಿಕ ಇಲಾಖೆ ಈ ವಿಷಯವಾಗಿ ಇಲ್ಲಿಯವರೆಗೆ ಕ್ರಮ ಜರುಗಿಸಿಲ್ಲ. ಆರೋಗ್ಯ ತಪಾಸಣೆ ಸೇರಿದಂತೆ ಪೌರಕಾರ್ಮಿಕರಿಗೆ ಸಿಗಬೇಕಾದ ಯಾವುದೇ ಸೌಲಭ್ಯಗಳು ಪೌರಕಾರ್ಮಿರಿಗೆ ಸಿಗುತ್ತಿಲ್ಲ ಎಂದು ಅವರು ದೂರಿದರು. ಈ ವಿಷಯ ಕುರಿತು ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. 15 ದಿನಗಳ ಒಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಪಟ್ಟಣದ ಬೀದಿಗಳಲ್ಲಿ ಭಿಕ್ಷಾಟನೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಪುರಸಭೆ ಸದಸ್ಯ ಮಹಾವೀರ ಕುರಾಡೆ ಸುಖದೇವ ಶಿಂಧೆ, ಆನಂದ ಕಾಂಬಳೆ, ಶೇಖರ ನಡುವಿಮಕೇರಿ, ರಾಜಕುಮಾರ ಸಂದ್ರಮನಿ, ಭಗವಂತ ಕಾರ್ಕೂನ, ಅನಿಲ ನಡುವಿನಕೇರಿ, ಮಹಾಂತೇಶ ಕಾಂಬಳೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ