ಆ್ಯಪ್ನಗರ

ಮಕ್ಕಳ ಮೇಲಿನ ದೌರ್ಜನ್ಯ ಸಹ್ಯವಲ್ಲ

ಮಕ್ಕಳ ಮೇಲಿನ ದೌರ್ಜನ್ಯ ಸಹ್ಯವಲ್ಲ ...

Vijaya Karnataka 15 Nov 2019, 5:00 am
ಬೆಳಗಾವಿ: ಮಕ್ಕಳಿಗೆ ಮೀಸಲಾಗಿರುವ ಹಕ್ಕುಗಳು ಅನುಭವಿಸಲು ಸಿಕ್ಕಾಗ ಮಾತ್ರ ದೇಶ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಜಿಲ್ಲಾಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್‌ ಲೂದ್‌ರ್‍ ಅಭಿಪ್ರಾಯಪಟ್ಟರು.
Vijaya Karnataka Web 14CHILD082637
ಮಕ್ಕಳ ಹಕ್ಕುಗಳ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿಗಣ್ಯರು ಬಿತ್ತಿ ಪತ್ರ ಬಿಡುಗಡೆಗೊಳಿಸಿದರು.


ಗುರುವಾರ ನಗರದ ಡಿ.ವೈ.ಸಿ ಭರತೇಶ್‌ ಪ್ರೌಢ ಶಾಲೆಯಲ್ಲಿ'ವಿಜಯ ಕರ್ನಾಟಕ', ಜಿಲ್ಲಾಮಕ್ಕಳ ಸಹಾಯವಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ, ಆರೋಗ್ಯ, ಪೊಲೀಸ್‌, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಜಾಗೃತಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಸಂವಿಧಾನ ಎಲ್ಲಮಕ್ಕಳಿಗೂ ಬದುಕು, ರಕ್ಷಣೆ, ವಿಕಾಸ ಮತ್ತು ಭಾಗವಹಿಸುವಿಕೆ ಎಂಬ ಹಕ್ಕುಗಳನ್ನು ನೀಡಿದೆ. ಅವುಗಳನ್ನು ಸಮರ್ಪಕವಾಗಿ ಮಕ್ಕಳಿಗೆ ಒದಗಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ. ಅದೇ ರೀತಿ ಹಕ್ಕುಗಳ ಉಲ್ಲಂಘನೆ ಮತ್ತು ದೌರ್ಜನ್ಯ ನಡೆದರೆ ಮಕ್ಕಳು ಸುಮ್ಮನಿರಬೇಕಿಲ್ಲ. ಮಕ್ಕಳಿಗಾಗಿಯೇ ಇರುವ ಮಕ್ಕಳ ಸಹಾಯವಾಣಿ 1098 ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಮಕ್ಕಳ ಸಹಾಯವಾಣಿ ಸಂಯೋಜಕ ಎಂ.ಕೆ.ಕುಂದರಗಿ ಪ್ರಸ್ತಾವಿಕ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸರಕಾರಿ ಸೇವೆಗಳ ಕುರಿತು ಮಾಹಿತಿ ನೀಡಿದರು.

ಬಾಲಕಾರ್ಮಿಕ ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ, ಕಾರ್ಮಿಕ ಅಧಿಕಾರಿ ತರುನಂ ಬಗಾಲಿ, ಪ್ರಾಚಾರ್ಯ ಎಸ್‌.ಎನ್‌.ಅಕ್ಕಿ ಮಾತನಾಡಿದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಉಮಾ ಭಂಡಾರಿ, ಕಾನೂನು ಪರಿವೀಕ್ಷಣಾಧಿಕಾರಿ ವೈಜೂಶಾ ಅಡಿಕೆ, ಶ್ರೀದೇವಿ ಗುಳ್ಳ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು. ಸುಧಾ ಕೋಲಕಾರ ಕಾರ್ಯಕ್ರಮ ನಿರೂಪಿಸಿದರು.

ಮಕ್ಕಳ ವಿಕಸನ:
ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಎಫ್‌.ಬಿ.ನದಾಫ್‌ ಮಾತನಾಡಿ, ದೇಶದ ಒಟ್ಟು ಜನಸಂಖ್ಯೆಯಲ್ಲಿಶೇ.40 ರಷ್ಟು ಮಕ್ಳಳಿರುವುದರಿಂದ ದೇಶದ ಭವಿಷ್ಯ ಕೂಡ ಮಕ್ಕಳು ಮತ್ತು ಯುವ ಜನಾಂಗವನ್ನು ಅವಲಂಬಿಸಿದೆ. ಮಕ್ಕಳು ತಮ್ಮ ಭವಿಷ್ಯದ ಜವಾಬ್ದಾರಿಯನ್ನು ಇಂದಿನಿಂದಲೆ ಹೊತ್ತುಕೊಳ್ಳಬೇಕು. ಸಾಕಷ್ಟು ಸೌಲಭ್ಯಗಳ ನಡುವೆಯೂ ಮಕ್ಕಳಲ್ಲಿಪೌಷ್ಟಿಕಾಂಶದ ಕೊರತೆ ಹೆಚ್ಚಿದೆ. ತಂತ್ರಜ್ಞಾನ ಬೆಳವಣಿಗೆ ನಡುವೆಯೂ ಬಾಲ್ಯ ವಿವಾಹ ಮುಂದುವರಿದಿದೆ. ಅಭಿವೃದ್ದಿಯ ಜತೆಗೆ ಮಕ್ಕಳು ವಿಕಸನ ಹೊಂದಬೇಕು. ಮಕ್ಕಳಿಗೆ ಸಮರ್ಥ, ಅಸಮರ್ಥ, ಕೀಳು, ಮೇಲು ಎನ್ನುವ ಲೇಬಲ… ಹಚ್ಚುವ ಪದ್ದತಿ ಬೇಡವೇ ಬೇಡ. ಪ್ರತಿಭೆಗಳನ್ನು ಪ್ರೋತ್ಸಾಹಿಸೋಣ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ