ಆ್ಯಪ್ನಗರ

‘ವಿಕ ವಿದ್ಯಾನಿಧಿ’ ವಿತರಣೆ ಇಂದು

'ವಿಜಯ ಕರ್ನಾಟಕ'ದ 'ವಿದ್ಯಾನಿಧಿ'ಯ ಚೆಕ್‌ಗಳ ವಿತರಣೆ ಸಮಾರಂಭ ಶನಿವಾರ ನಡೆಯಲಿದೆ ಬೆಳಗಾವಿಯ ಶಿವಬಸವನಗರದಲ್ಲಿರುವ ಎಸ್‌ಜಿ...

Vijaya Karnataka 22 Jun 2019, 5:00 am
ಬೆಳಗಾವಿ: 'ವಿಜಯ ಕರ್ನಾಟಕ'ದ 'ವಿದ್ಯಾನಿಧಿ'ಯ ಚೆಕ್‌ಗಳ ವಿತರಣೆ ಸಮಾರಂಭ ಶನಿವಾರ ನಡೆಯಲಿದೆ. ಬೆಳಗಾವಿಯ ಶಿವಬಸವನಗರದಲ್ಲಿರುವ ಎಸ್‌.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ (ಎಸ್‌ಜಿಬಿಐಟಿ)ದಲ್ಲಿ ಮಧ್ಯಾಹ್ನ 12 ಗಂಟೆಗೆ ಜರುಗಲಿರುವ ಈ ಸಮಾರಂಭದಲ್ಲಿ ನಾಗನೂರು ರುದ್ರಾಕ್ಷಿಮಠದ ಶ್ರೀ ಸಾವಳಗೀಶ್ವರ ದೇವರು ಸಾನ್ನಿಧ್ಯ ವಹಿಸುವರು. ಜಿಲ್ಲಾಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಪರಿಸರವಾದಿ ಶಿವಾಜಿ ಕಾಗಣೀಕರ ಹಾಗೂ ಎಸ್‌ಜಿಬಿಐಟಿ ಪ್ರಾಂಶುಪಾಲ ಡಾ. ಸಿದ್ರಾಮಪ್ಪ ಇಟ್ಟಿ ಪಾಲ್ಗೊಳ್ಳುವರು. ಬಡ ಪ್ರತಿಭಾನ್ವಿತ ಪಿಯುಸಿ ವಿದ್ಯಾರ್ಥಿಗಳ ಮುಂದಿನ ಓದಿಗೆ ಸಹಾಯವಾಗುವ ನಿಟ್ಟಿನಲ್ಲಿ ದಾನಿಗಳ ನೆರವಿನೊಂದಿಗೆ 'ವಿಕ' ಈ ಕಾರ್ಯಕ್ರಮ ಆಯೋಜಿಸಿದೆ.
Vijaya Karnataka Web vk vidya nidhi distribution today
‘ವಿಕ ವಿದ್ಯಾನಿಧಿ’ ವಿತರಣೆ ಇಂದು


ದಿನಾಂಕ: 22.06.2019, ಶನಿವಾರ
ಸಮಯ: ಮಧ್ಯಾಹ್ನ 12 ಗಂಟೆ
ಸ್ಥಳ: ಎಸ್‌.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ಶಿವಬಸವನಗರ, ಬೆಳಗಾವಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ