ಅಥಣಿ: ಮತಕ್ಷೇತ್ರದಲ್ಲಿಕಾಂಗ್ರೆಸ್ನಿಂದ ಬಂಡಾಯವೆದ್ದು ನಾಮಪತ್ರ ಸಲ್ಲಿಸಿ ಪಕ್ಷಕ್ಕೆ ತೀವ್ರ ಇರಸುಮುರಸು ತಂದಿದ್ದ ಮೂವರು ಮುಖಂಡರು ಈಗ ಅಧಿಕೃತ ಅಭ್ಯರ್ಥಿ ಗಜಾನನ್ ಮಂಗಸೂಳಿ ಅವರ ಪರ ಪ್ರಚಾರ ಕಾರ್ಯದಲ್ಲಿನಿರತರಾಗಿದ್ದಾರೆ.
ಮಂಗಸೂಳಿ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ, ಮುಖಂಡ ಸದಾಶಿವ ಬುಟಾಳೆ ಹಾಗೂ ಸುರೇಶ್ ಪಾಟೀಲ ಬಂಡಾಯವೆದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಈ ದಿಢೀರ್ ಬೆಳವಣಿಗೆಯಿಂದ ಕಂಗಾಲಾಗಿದ್ದ ರಾಜ್ಯ ನಾಯಕರು ಮಾಜಿ ಸಚಿವ ಎಂ.ಬಿ. ಪಾಟೀಲ ಅವರನ್ನು ಸಂಧಾನಕ್ಕೆ ಕಳಿಸಿ ಕೊನೇ ಕ್ಷಣದಲ್ಲಿಅವರ ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಲು ಶಕ್ಯರಾಗಿದ್ದರು. ಈಗ ಇವರೆಲ್ಲರೂ ತಾಲೂಕಿನ ನಾನಾ ಕಡೆ ಕಾಂಗ್ರೆಸ್ ಪರ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಮಂಗಸೂಳಿ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ, ಮುಖಂಡ ಸದಾಶಿವ ಬುಟಾಳೆ ಹಾಗೂ ಸುರೇಶ್ ಪಾಟೀಲ ಬಂಡಾಯವೆದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಈ ದಿಢೀರ್ ಬೆಳವಣಿಗೆಯಿಂದ ಕಂಗಾಲಾಗಿದ್ದ ರಾಜ್ಯ ನಾಯಕರು ಮಾಜಿ ಸಚಿವ ಎಂ.ಬಿ. ಪಾಟೀಲ ಅವರನ್ನು ಸಂಧಾನಕ್ಕೆ ಕಳಿಸಿ ಕೊನೇ ಕ್ಷಣದಲ್ಲಿಅವರ ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಲು ಶಕ್ಯರಾಗಿದ್ದರು. ಈಗ ಇವರೆಲ್ಲರೂ ತಾಲೂಕಿನ ನಾನಾ ಕಡೆ ಕಾಂಗ್ರೆಸ್ ಪರ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.