ಆ್ಯಪ್ನಗರ

ಒಟ್ಟಿಗೆ ಮತಯಾಚಿಸಿದ ‘ಕೈ’ ಮುಖಂಡರು

ಅಥಣಿ: ಮತಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಂಡಾಯವೆದ್ದು ...

Vijaya Karnataka 24 Nov 2019, 5:00 am
ಅಥಣಿ: ಮತಕ್ಷೇತ್ರದಲ್ಲಿಕಾಂಗ್ರೆಸ್‌ನಿಂದ ಬಂಡಾಯವೆದ್ದು ನಾಮಪತ್ರ ಸಲ್ಲಿಸಿ ಪಕ್ಷಕ್ಕೆ ತೀವ್ರ ಇರಸುಮುರಸು ತಂದಿದ್ದ ಮೂವರು ಮುಖಂಡರು ಈಗ ಅಧಿಕೃತ ಅಭ್ಯರ್ಥಿ ಗಜಾನನ್‌ ಮಂಗಸೂಳಿ ಅವರ ಪರ ಪ್ರಚಾರ ಕಾರ್ಯದಲ್ಲಿನಿರತರಾಗಿದ್ದಾರೆ.
Vijaya Karnataka Web vote hand leaders together
ಒಟ್ಟಿಗೆ ಮತಯಾಚಿಸಿದ ‘ಕೈ’ ಮುಖಂಡರು


ಮಂಗಸೂಳಿ ಅವರಿಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ, ಮುಖಂಡ ಸದಾಶಿವ ಬುಟಾಳೆ ಹಾಗೂ ಸುರೇಶ್‌ ಪಾಟೀಲ ಬಂಡಾಯವೆದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಈ ದಿಢೀರ್‌ ಬೆಳವಣಿಗೆಯಿಂದ ಕಂಗಾಲಾಗಿದ್ದ ರಾಜ್ಯ ನಾಯಕರು ಮಾಜಿ ಸಚಿವ ಎಂ.ಬಿ. ಪಾಟೀಲ ಅವರನ್ನು ಸಂಧಾನಕ್ಕೆ ಕಳಿಸಿ ಕೊನೇ ಕ್ಷಣದಲ್ಲಿಅವರ ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಲು ಶಕ್ಯರಾಗಿದ್ದರು. ಈಗ ಇವರೆಲ್ಲರೂ ತಾಲೂಕಿನ ನಾನಾ ಕಡೆ ಕಾಂಗ್ರೆಸ್‌ ಪರ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ