ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲ್ರ ಜನ್ಮದಿನದ ಸಂದರ್ಭದಲ್ಲಿಬಿಜೆಪಿ ಸಮಾಜದಲ್ಲಿಪರಿವರ್ತನೆ ತರುವ ಆಶಯದೊಂದಿಗೆ ಜಿಲ್ಲೆಯಲ್ಲಿದೀರ್ಘ ಪಾದಯಾತ್ರೆ ಆಯೋಜಿಸಿದೆ. ಗಾಂಧೀಜಿಯ 150ನೇ ಜನ್ಮದಿನವಾದ ಅ.2ರಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ ಕಟೀಲ್ ನಗರದ ಟಿಳಕವಾಡಿಯ ವೀರಸೌಧದಲ್ಲಿಪಾದಯಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಇದು ಸರದಾರ ವಲ್ಲಭಭಾಯಿ ಪಟೇಲರ ಜನ್ಮದಿನವಾದ ಅ. 30ರ ವರೆಗೆ ನಡೆಯುತ್ತದೆ. ''ಪ್ರತಿ ಸಂಸದರ ಕ್ಷೇತ್ರದಲ್ಲಿ150 ಕಿಮೀ ಪಾದಯಾತ್ರೆ ಮಾಡಲಾಗುತ್ತದೆ. ಬಿಜೆಪಿ ಸಂಸದರು ಸ್ವತಃ 150 ಕಿಮೀ ಪಾದಯಾತ್ರೆ ನಡೆಸಿ ಜನಜಾಗೃತಿ ತರಬೇಕೆಂಬ ನಿರ್ದೇಶನ ಪಕ್ಷದಿಂದ ಇದೆ'', ಎಂದು ಬಿಜೆಪಿ ವಿಭಾಗ ಪ್ರಭಾರಿ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಇಂದು ಬಿಜೆಪಿ ಪಾದಯಾತ್ರೆಗೆ ಚಾಲನೆ
ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲ್ ...
Vijaya Karnataka 2 Oct 2019, 5:00 am