ಆ್ಯಪ್ನಗರ

ಸಕಾಲಕ್ಕೆ ಕಬ್ಬಿನ ದರ ಪಾವತಿಸದಿದ್ದರೆ ಸಾಗಾಟ ತಡೆ ಎಚ್ಚರಿಕೆ

ಬೋರಗಾಂವ: ಕರ್ನಾಟಕದ, ಅದರಲ್ಲೂ ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ 2300ರಿಂದ 2700 ರೂ...

Vijaya Karnataka 28 Jun 2019, 5:00 am
ಬೋರಗಾಂವ : ಕರ್ನಾಟಕದ, ಅದರಲ್ಲೂ ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ 2300ರಿಂದ 2700 ರೂ.ವರೆಗೆ ಮಾತ್ರ ಕಬ್ಬಿನ ಹಣ ಪಾವತಿಸಿದ್ದು ಸಕಾಲಕ್ಕೆ ಹಣ ಪಾವತಿಸದಿದ್ದರೆ ಮುಂಬರುವ ಹಂಗಾಮಿನಲ್ಲಿ ಗಣಿಕೆ ಕಬ್ಬನ್ನು ಕಾರ್ಖಾನೆಗಳಿಗೆ ಸಾಗಿಸಲು ಬಿಡುವುದಿಲ್ಲವೆಂದು ಸ್ವಾಭಿಮಾನಿ ರೈತ ಸಂಘಟಣೆಯ ಅಧ್ಯಕ್ಷ , ಮಾಜಿ ಸಂಸದ ರಾಜು ಶೆಟ್ಟಿ ಕಾರ್ಖಾನೆಗಳಿಗೆ ಎಚ್ಚರಿಸಿದ್ದಾರೆ.
Vijaya Karnataka Web BEL-27ICH3


ಅವರು ನಿಪ್ಪಾಣಿಯ ಪ್ರವಾಸಿ ಮಂದಿರದಲ್ಲಿ ನಡೆದ ಸ್ವಾಭಿಮಾನಿ ರೈತ ಸಂಘಟನೆಯ ಕಾರ್ಯಕರ್ತರ ಸಭೆಯ ನಂತರ 'ವಿಜಯಕರ್ನಾಟಕ'ಕ್ಕೆ ಈ ವಿಷಯ ತಿಳಿಸಿದರು.

ಕರ್ನಾಟಕದಲ್ಲೀಗ ಕಬ್ಬುಬೆಳೆ ಕ್ಷೇತ್ರ ಕಡಿಮೆಯಾಗಿದ್ದರಿಂದ ಬರುವ 2020-21ರ ಹಂಗಾಮು ಪೂರ್ಣಗೊಳಿಸುವುದು ಕಾರ್ಖಾನೆದಾರರಿಗೆ ತಲೆನೋವಾಗಿ ಪರಿಣಮಿಸಲಿದ್ದು ಯಾವ ಸಕ್ಕರೆ ಕಾರ್ಖಾನೆಗಳು ರೈತ ಸದಸ್ಯರಿಗೆ ಸಕಾಲಕ್ಕೆ ಹಣ ಪಾವತಿಸದೆ ರೈತರಿಗೆ ಅನ್ಯಾಯಮಾಡಿವೆ. ಕಳೆದ ವರ್ಷದಲ್ಲಿ ಪಾವತಿಸಬೇಕಾದ ಕಟ್‌ಬಾಕಿ ಹಣ ಸೇರಿ ಬರೋಬ್ಬರಿ 628 ಕೋಟಿ ರೂ. ಉಳಿಸಿಕೊಂಡಿವೆ ಎಂದು ಆರೋಪಿಸಿದರು.

ಅಂತಹ ಸಕ್ಕರೆ ಕಾರ್ಖಾನೆಗಳು ಬರುವ ಹಂಗಾಮಿನಲ್ಲಿ ಇದರ ಪರಿಣಾಮ ಅನುಭವಿಸಲಿವೆ. ಕಳೆದ ನಾಲ್ಕು ತಿಂಗಳಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೆ ಕಬ್ಬು ಸೇರಿದಂತೆ ಇನ್ನುಳಿದ ಬೆಳೆಗಳೂ ಒಣಗಿಹೋಗಿದ್ದು ರೈತರಿಗೆ ಕೊಟ್ಯಾಂತರ ರೂ. ಹಾನಿಯಾಗಿದೆ. ಅದರಲ್ಲೂ ಕರ್ನಾಟಕ ಸರಕಾರ ಕೃಷ್ಣಾ ನದಿಗೆ ಸಕಾಲಕ್ಕೆ ನೀರು ಬಿಟ್ಟುಕೊಳ್ಳಲು ವಿಫಲವಾಗಿದ್ದು ರೈತರ ಬಾಯಿಗೆ ಬಂದ ತುತ್ತನ್ನು ಕಸಿದುಕೊಂಡಿದೆ. ಆದಷ್ಟು ಬೇಗ ಗಡಿಭಾಗದಲ್ಲಿ ಸ್ವಾಭಿಮಾನಿ ರೈತ ಸಂಘಟನೆ ವತಿಯಿಂದ ರೈತ ಸಮಾವೇಶ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಎನ್‌.ವೈ. ಖೋತ, ನಿಖಿಲ್‌ ಪಾಟೀಲ, ಜಾಲಿಂದರ ಪಾಟೀಲ, ರಾಜೇಂದ್ರ ಗಡೆನ್ನವರ, ಅನಿಲ ಸಂಕಪಾಳ, ಸಚಿನ್‌ ಖೋತ, ಮಲಗೊಂಡ ತಾವದಾರೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ