ಆ್ಯಪ್ನಗರ

ನೊಣಗಳ ಹಾವಳಿ ನಿಯಂತ್ರಣಕ್ಕೆ ತಾಕೀತು

ಚನ್ನಮ್ಮನ ಕಿತ್ತೂರು: ನೊಣಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ...

Vijaya Karnataka 4 Sep 2018, 5:00 am
ಚನ್ನಮ್ಮನ ಕಿತ್ತೂರು: ನೊಣಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೊನ್ನಾಪುರದ ಚನ್ನಮ್ಮ ಪೌಲ್ಟ್ರಿ ಫಾರ್ಮ್‌ ಮಾಲೀಕರಿಗೆ ತಹಸೀಲ್ದಾರ ಪ್ರವೀಣ ಹುಚ್ಚಣ್ಣವರ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.
Vijaya Karnataka Web BEL-3KITTURPHOTO 3


ಸಾರ್ವಜನಿಕರಿಂದ ದೂರು ಕೇಳಿ ಬಂದಿದ್ದರಿಂದ ಪೌಲ್ಟ್ರಿ ಫಾರ್ಮಿಗೆ ಸೋಮವಾರ ಭೇಟಿ ನೀಡಿದ ಅವರು, ನೊಣಗಳ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಫಾರ್ಮಿನ ಪ್ರಾಂಗಣದಲ್ಲಿ ಗಲೀಜು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಬಿದ್ದ ಮಳೆ ನೀರು ಒಂದೆಡೆ ನಿಂತು ಕೊಳಚೆ ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು. ಇಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡುವವರಿಗೆ ಮಾಸ್ಕ್‌, ಕೈಗವಚ ಮುಂತಾದ ಸಲಕರಣೆ ನೀಡಬೇಕು ಎಂದು ಅವರು ಕೆಲವು ಸಲಹೆಗಳನ್ನು ನೀಡಿದರು.

ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರೂ ಫಾರ್ಮಿಗೆ ಭೇಟಿ ನೀಡಿದ್ದು, ಕೆಲ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಕ್ರಿಮಿನಾಶಕದ ಯಡವಟ್ಟು: ನಾವು ಸಿಂಪಡಣೆ ಮಾಡಲು ಖರೀದಿಸುವ ಸಾವಯವ ಕ್ರಿಮಿನಾಶಕದಲ್ಲಿ ದೋಷ ಕಂಡು ಬಂದಿದ್ದರಿಂದ ಹೀಗಾಗಿದೆ. ತಜ್ಞರನ್ನು ಕರೆಸಿ ವಾಸ್ತವಾಂಶ ಪತ್ತೆ ಹಚ್ಚಿ ಕ್ರಿಮಿನಾಶಕ ಬದಲಾಯಿಸಿದ್ದೇವೆ. ಸದ್ಯ ನೊಣಗಳ ಹಾವಳಿ ನಿಯಂತ್ರಣಕ್ಕೆ ಬಂದಿದ್ದು, ಶೀಘ್ರ ಅಲ್ಪಸ್ವಲ್ಪ ಇರುವ ನೊಣಗಳೂ ಕಡಿಮೆ ಆಗಲಿವೆ ಎಂದು ಫಾರ್ಮಿನ ಉಸ್ತುವಾರಿ ನೋಡಿಕೊಳ್ಳುವ ಕೊಂಡಾರೆಡ್ಡಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ