ಆ್ಯಪ್ನಗರ

30 ಗ್ರಾಮಗಳಲ್ಲಿ ನೀರು, ಮೇವಿನ ಕೊರತೆ ನೀಗಿಸಿ

ಕಾಗವಾಡ: ಕಾಗವಾಡ ವಿಧಾನಸಭೆ ಮತಕ್ಷೇತ್ರದ ಮದಬಾವಿ ಮತ್ತು ಅನಂತಪುರ ಜಿಪಂ ಕ್ಷೇತ್ರ ವ್ಯಾಪ್ತಿಯ 30 ಗ್ರಾಮಗಳಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರು ಮತ್ತು ...

Vijaya Karnataka 27 Feb 2019, 5:00 am
ಕಾಗವಾಡ : ಕಾಗವಾಡ ವಿಧಾನಸಭೆ ಮತಕ್ಷೇತ್ರದ ಮದಬಾವಿ ಮತ್ತು ಅನಂತಪುರ ಜಿಪಂ ಕ್ಷೇತ್ರ ವ್ಯಾಪ್ತಿಯ 30 ಗ್ರಾಮಗಳಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಬಾರದಂತೆ ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.
Vijaya Karnataka Web BEL-26 KAGWAD 1 NEWS PHOTO


ಅವರು ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕಿನ ಎಲ್ಲ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ತಾಲೂಕಿನ ತಹಸೀಲ್ದಾರ್‌, ನೀರಾವರಿ, ಕೃಷಿ, ಪಂಚಾಯಿತಿ, ಜಿಪಂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾಹಿತಿ ನೀಡಿದ ಅಥಣಿ ಉಪತಹಸೀಲ್ದಾರ್‌ ಆರ್‌.ಆರ್‌. ಬುರಲಿ 'ತಾಲೂಕಿನ ಜಕ್ಕಾರಟ್ಟಿ, ಶಿರೂರ, ಖೀಳೆಗಾಂವದಲ್ಲಿ ಈಗಾಗಲೇ ಮೇವು ಬ್ಯಾಂಕ್‌ ಆರಂಭಿಸಲಾಗಿದೆ. ಟ್ಯಾಂಕರ್‌ ಮೂಲಕ ಕುಡಿಯುವ ನೀರಿನ ಸರಬರಾಜು ಆರಂಭವಾಗಿದೆ. ಇದರಲ್ಲಿ ಜಂಬಗಿ-2, ಶಿರೂರ ಮತ್ತು ಅಜೂರ ಗ್ರಾಮಗಳಲ್ಲಿ ತಲಾ ಒಂದೊಂದು ಟ್ಯಾಂಕರ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ' ಎಂದ ಅವರು 'ಇತರ ಗ್ರಾಮಗಳಿಗೂ ಟ್ಯಾಂಕರ್‌ ನೀರು ಪೂರೈಕೆ ಪ್ರಾರಂಭಿಸುವಂತೆ ಬೇಡಿಕೆ ಬರುತ್ತಿದೆ' ಎಂದರು.

30ಗ್ರಾಮಕ್ಕೆ ನೀರು, ಮೇವು ಪೂರೈಸಿ :
ಅನಂತಪುರ ಮತ್ತು ಮದಭಾವಿ ಜಿಪಂ ವ್ಯಾಪ್ತಿಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಅಲ್ಲಿ ನೀರಿನ ಗಂಭೀರ ಸಮಸ್ಯೆಯಿದೆ. ಎಲ್ಲ ಗ್ರಾಪಂ, ತಾಪಂ, ಜಿಪಂ ಚುನಾಯಿತ ಪ್ರತಿನಿಧಿಗಳು, ಪಿಡಿಒ, ಗ್ರಾಮದ ಮುಖಂಡರು ಬರ ಎದುರಿಸಲು ಪಕ್ಷ ಭೇದ ಮಾಡಬೇಡಿ. ಈ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಶಾಸಕರು ಎಚ್ಚರಿಸಿದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪನ್ನವರ, ನೀರಾವರಿ ಇಲಾಖೆಯ ಎ.ಟಿ. ಅಸ್ಕಿ, ಅಥಣಿ ನೀರಾವರಿ ಇಲಾಖೆ ಮುಖ್ಯಾಧಿಕಾರಿ ರಾಠೋಡ, ಕಾರ್ಯಪಾಲ ಅರುಣ ಯಲಗುದ್ರಿ, ಕೃಷಿ ಇಲಾಖೆ ನಿರ್ದೇಶಕಿ ಹಿರೇಮಠ, ತೋಟಗಾರಿಕೆ ಇಲಾಖೆಯ ಚುರಮುರಿ ಪಾಲ್ಗೊಂಡಿದ್ದರು.

ಜಿಪಂ ಸದಸ್ಯ ಆರ್‌.ಎಂ. ಪಾಟೀಲ, ಈಶ್ವರ ಕುಂಬಾರೆ, ಪ್ರಶಾಂತ ಅವಳೆಕರ, ಆರ್‌.ಐ. ನಾಯಿಕ, ಎಂ.ಎಸ್‌. ಕಾಳೆ, ವಿಜಯ ಕಾಂಬಳೆ, ಶಂಕರ ದೇಸಾಯಿ, ಧೊಂಡಿರಾಮ ಅವಳೆಕರ ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ