ಆ್ಯಪ್ನಗರ

ಶಿಂದೋಳ್ಳಿ ಗ್ರಾಮದ ಹೊಲಕ್ಕೆ ಹೋಗುವ ರಸ್ತೆ ಒಡೆದು ಹೊಲಗಳಿಗೆ ನುಗ್ಗಿದ ನೀರು

ಬಾಳೆಕುಂದ್ರಿ: ಧಾರಾಕಾರ ಮಳೆಗೆ ಸಮೀಪದ ಶಿಂದೋಳ್ಳಿ ...

Vijaya Karnataka 8 Aug 2020, 5:00 am
ಬಾಳೆಕುಂದ್ರಿ: ಧಾರಾಕಾರ ಮಳೆಗೆ ಸಮೀಪದ ಶಿಂದೋಳ್ಳಿ ಗ್ರಾಮದ ಹೊಲಕ್ಕೆ ಹೋಗುವ ರಸ್ತೆ ಶುಕ್ರವಾರ ಒಡೆದು ಅಪಾರ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ರಸ್ತೆ ಬದಿಯಲ್ಲಿಬೆಳೆದಿದ್ದ ಭತ್ತ ಹಾಗೂ ಇತರ ಬೆಳೆಗಳ ಗದ್ದೆಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
Vijaya Karnataka Web 7 BLK 1 PTO_53
ಮಳೆಗೆ ಶಿಂದೋಳ್ಳಿ ಗ್ರಾಮದ ಹೊಲಕ್ಕೆ ಹೋಗುವ ರಸ್ತೆ ಒಡೆದಿರುವುದು.


ಕಳೆದ ವರ್ಷ ಸಹ ಮಳೆ ಬಂದಾಗ ಇದೇ ಜಾಗದಲ್ಲಿರಸ್ತೆ ಒಡೆದು ಬೆಳೆ ನಾಶವಾಗಿತ್ತು. ಆಗ ಸಮರ್ಪಕವಾಗಿ ದುರಸ್ತಿ ಕಾರ್ಯ ನಡೆಯದ ಕಾರಣ ರಸ್ತೆ ಮತ್ತೆ ಒಡೆದು ಬೆಳೆ ಹಾನಿಯಾಗಿದೆ. ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಗ್ರಾಮದ ವೀರಭದ್ರಯ್ಯ ಬಾಬು ಪೂಜಾರ ಮತ್ತಿತರರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ