ಆ್ಯಪ್ನಗರ

ಕೃಷ್ಣೆಗೆ ನೀರು: ಸಿಎಂಗೆ ಶಾಸಕ ಶ್ರೀಮಂತ ಮನವಿ

ಕಾಗವಾಡ: ಕೃಷ್ಣಾ ನದಿಗೆ ನೀರು ಹರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಶಾಸಕ ಶ್ರೀಮಂತ ಪಾಟೀಲ ನೇತೃತ್ವದ ಅಥಣಿ ಭಾಗದ ಪ್ರಮುಖರ ನಿಯೋಗ ...

Vijaya Karnataka 17 May 2019, 5:00 am
ಕಾಗವಾಡ : ಕೃಷ್ಣಾ ನದಿಗೆ ನೀರು ಹರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಶಾಸಕ ಶ್ರೀಮಂತ ಪಾಟೀಲ ನೇತೃತ್ವದ ಅಥಣಿ ಭಾಗದ ಪ್ರಮುಖರ ನಿಯೋಗ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದೆ.
Vijaya Karnataka Web water for krishna river mla shrimant appeal to cm
ಕೃಷ್ಣೆಗೆ ನೀರು: ಸಿಎಂಗೆ ಶಾಸಕ ಶ್ರೀಮಂತ ಮನವಿ


ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗ, ಕೃಷ್ಣಾ ನದಿ ಬತ್ತಿಹೋಗಿರುವುದರಿಂದ ಈ ಭಾಗದ ಜನ ಜಾನುವಾರುಗಳಿಗೆ ಆಗಿರುವ ತೊಂದರೆಗಳನ್ನು ವಿವರಿಸಿದರು. ''ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದು, ನೀರಿಗಾಗಿ ಜೀವ ಹಾನಿಯಾಗುವ ಭಯ ಉಂಟಾಗಿದೆ. ಹೀಗಾಗಿ, ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹರಿಸಲು ತಕ್ಷಣ ಕ್ರಮ ವಹಿಸಬೇಕು'', ಎಂದು ಮನವಿ ಮಾಡಿದರು.

''ಕಾಗವಾಡ ಮತ್ತು ಅಥಣಿ ಮತಕ್ಷೇತ್ರದ ಪೂರ್ವಭಾಗದ ಜನ ಈ ವರೆಗೆ ಬರ ಎದುರಿಸುತ್ತಾ ಬಂದಿದ್ದಾರೆ. ಈಗ ನದಿ ತೀರದ ಜನರೂ ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾಗವಾಡ ಕ್ಷೇತ್ರದ ನದಿ ತೀರದಲ್ಲಿರುವ ಉಗಾರ, ಕುಸನಾಳ, ಮೊಳವಾಡ, ಐನಾಪುರ ಸೇರಿದಂತೆ ಅನೇಕ ಗ್ರಾಮದ ಜನ ನೀರಿಲ್ಲದೆ ಕಂಗಾಲಾಗಿದ್ದಾರೆ. ತಾಲೂಕಾಡಳಿತ ನೀರಿನ ವ್ಯವಸ್ಥೆ ಮಾಡುತ್ತಿದ್ದರೂ ಅದು ಸಾಲುತ್ತಿಲ್ಲ. ಬರುವ ಮೂರು ದಿನಗಳಲ್ಲಿ ಮಹಾರಾಷ್ಟ್ರದ ಕೊಯ್ನಾ, ಕಾಳಮ್ಮವಾಡಿ ಅಥವಾ ಕರ್ನಾಟಕದ ಹಿಡಕಲ್‌ ಅಣೆಕಟ್ಟೆಯಿಂದ ನೀರು ಹರಿಸಿ'', ಎಂದು ಕೋರಿದರು.

ಶಾಸಕರೊಂದಿಗೆ ಅಥಣಿಯ ನ್ಯಾಯವಾದಿ ಬಿ.ಎ.ಚವ್ಹಾಣ, ರೈತ ಮುಖಂಡ ದಾದಾ ಪಾಟೀಲ, ಜಿಪಂ ಮಾಜಿ ಸದಸ್ಯ ಅಪ್ಪಾಸಾಹೇಬ ಅವತಾಡೆ, ಅಬ್ದುಲ್‌ ಬಾರಿ ಮುಲ್ಲಾ ಮತ್ತಿತರರು ಇದ್ದರು.

ಕೃಷ್ಣಾ ನದಿಗೆ ನೀರು ಹರಿಸುವವರೆಗೆ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದ ಮುಖ್ಯಮಂತ್ರಿಗಳಿಗೆ ನೇರವಾಗಿ ಹೇಳಿದ್ದೇನೆ. ಸಮಸ್ಯೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚೆ ನಡೆಸಲಾಗಿದೆ.
- ಶ್ರೀಮಂತ ಪಾಟೀಲ, ಕಾಗವಾಡ ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ