ಆ್ಯಪ್ನಗರ

ಬಾಯಾರಿದವರ ದಾಹ ತಣಿಸುವ ಅರವಟ್ಟಿಗೆ

ಬೆಳಗಾವಿ: ಬಿಸಿಲಿನಿಂದ ಬಳಲಿದವರ ಹಾಗೂ ಪ್ರಾಣಿ, ಪಕ್ಷಿ ಸಂಕುಲದ ದಾಹ ತಣಿಸಲು ಮಾನವೀಯ ಅಂತಃಕರಣ ಹೊಂದಿದ ಜನ ನಗರದ ನಾನಾ ಕಡೆ, ಮನೆ, ದೇವಾಲಯಗಳ ಮುಂದೆ ...

Vijaya Karnataka 15 Mar 2019, 5:00 am
ಬೆಳಗಾವಿ : ಬಿಸಿಲಿನಿಂದ ಬಳಲಿದವರ ಹಾಗೂ ಪ್ರಾಣಿ, ಪಕ್ಷಿ ಸಂಕುಲದ ದಾಹ ತಣಿಸಲು ಮಾನವೀಯ ಅಂತಃಕರಣ ಹೊಂದಿದ ಜನ ನಗರದ ನಾನಾ ಕಡೆ, ಮನೆ, ದೇವಾಲಯಗಳ ಮುಂದೆ ಅರವಟ್ಟಿಗೆಯ ವ್ಯವಸ್ಥೆ ಮಾಡಿದ್ದಾರೆ.
Vijaya Karnataka Web BLG-1403-2-52-14RAJU-7


ಒದ್ದೆ ಇರುವ ಸೆಣಬಿನ ತಟ್ಟು ಸುತ್ತಿ ಮನೆ, ದೇವಾಲಯಗಳ ಮುಂದೆ ಇಟ್ಟಿರುವ ಮಣ್ಣಿನ ಹೂಜಿ, ಮಡಿಕೆ-ಹರವಿಗಳು ಬಾಯಾರಿದವರಿಗೆ ದಾಹ ತಣಿಸುತ್ತಿವೆ.

ಇನ್ನೂ ಕೆಲವರು ಜಾನುವಾರು ಹಾಗೂ ಪ್ರಾಣಿ, ಪಕ್ಷಿಗಾಳಿಗಾಗಿ ರಸ್ತೆ ಬದಿಗೆ ಸಿಮೆಂಟಿನ ತೊಟ್ಟಿಗಳಲ್ಲಿ ನೀರು ತುಂಬಿ ಇಟ್ಟಿದ್ದಾರೆ. ಮನೆ ಮಾಳಿಗೆ ಮೇಲೆ ಪಕ್ಷಿ ಸಂಕುಲಕ್ಕೆ ನೀರಿನ ವ್ಯವಸ್ಥೆ ಮಾಡಿದ್ದಾರೆ. ಮನೆ ಆವರಣದ ಗಿಡಗಳ ಟೊಂಗೆಗಳಿಗೆ ಮಡಿಕೆಯಲ್ಲಿ ನೀರು ತುಂಬಿ ತೂಗು ಬಿಟ್ಟಿದ್ದಾರೆ. ಬಿಸಿಲು ಹೆಚ್ಚುತ್ತಿದ್ದಂತೆ ಅರವಟ್ಟಿಗೆಗಳ ಸಂಖ್ಯೆಗಳೂ ಹೆಚ್ಚುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ