ಆ್ಯಪ್ನಗರ

ಕೃಷ್ಣೆ ತಲುಪಿದ ಘಟಪ್ರಭಾ ನೀರು

ಬೆಳಗಾವಿ: ಘಟಪ್ರಭಾ ನದಿಯ ಹಿಡಕಲ್‌ ಜಲಾಶಯದಿಂದ ಬಿಡುಗಡೆ ಮಾಡಿರುವ ನೀರು ಗುರುವಾರ ಸಂಜೆ ಕೃಷ್ಣಾ ನದಿಗೆ ಸೇರಿದೆ...

Vijaya Karnataka 25 May 2019, 5:00 am
ಬೆಳಗಾವಿ : ಘಟಪ್ರಭಾ ನದಿಯ ಹಿಡಕಲ್‌ ಜಲಾಶಯದಿಂದ ಬಿಡುಗಡೆ ಮಾಡಿರುವ ನೀರು ಗುರುವಾರ ಸಂಜೆ ಕೃಷ್ಣಾ ನದಿಗೆ ಸೇರಿದೆ.
Vijaya Karnataka Web water released from ghataprabha reaches krishna river
ಕೃಷ್ಣೆ ತಲುಪಿದ ಘಟಪ್ರಭಾ ನೀರು


ಜಲಾಶಯದಿಂದ ಮೇ 20ರಿಂದ ಒಂದು ಟಿಎಂಸಿ ನೀರು ಬಿಡುಗಡೆ ಮಾಡಲಾಗಿತ್ತು. ನಂತರ ಧುಪದಾಳ ಜಲ ಸಂಗ್ರಹಾಗಾರದಿಂದ ಹಿರೇಹಳ್ಳ ಮತ್ತು ಹಾಲಹಳ್ಳಗಳ ಮೂಲಕ ಕೃಷ್ಣಾ ನದಿಗೆ ನೀರು ಹರಿಸಲಾಗಿತ್ತು. ಈ ಪೈಕಿ ಹಿರೇಹಳ್ಳದಿಂದ ಹೊರಟ ನೀರು ಗುರುವಾರ ಸಂಜೆ ಕೃಷ್ಣಾ ನದಿ ಸೇರಿದೆ. ಹಾಲಹಳ್ಳ ಮೂಲಕ ಸಾಗುತ್ತಿರುವ ನೀರು ಶನಿವಾರ ಕೃಷ್ಣಾ ನದಿ ಸೇರುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಗಲಕೋಟೆಗೆ ನೀರು: ಮೊದಲೇ ನಿರ್ಧರಿಸಿದಂತೆ ಬಾಗಲಕೋಟೆ ಜಿಲ್ಲೆಗೆ ಎರಡನೇ ಹಂತದಲ್ಲಿ 2.1 ಟಿಎಂಸಿ ನೀರು ಬಿಡುಗಡೆಗೆ ಶುಕ್ರವಾರ ಕ್ರಮ ಕೈಗೊಳ್ಳಲಾಗಿದೆ. ''ಶುಕ್ರವಾರದಿಂದಲೇ ಪ್ರತಿ ದಿನ 3000 ಕ್ಯೂಸೆಕ್‌ ನೀರನ್ನು ಘಟಪ್ರಭಾ ನದಿಗೆ ಬಿಡಲಾಗುತ್ತಿದೆ. ಒಟ್ಟು 2.1 ಟಿಎಂಸಿ ನೀರು ಒಂದು ವಾರದಲ್ಲಿ ಬಾಗಲಕೋಟೆ ಬಳಿಯ ಆನದಿನ್ನಿ ಬ್ಯಾರೇಜ್‌ ತಲುಪಲಿದೆ'', ಎಂದು ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್‌ ಅರವಿಂದ ಕಣಗಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ