ಆ್ಯಪ್ನಗರ

ಟ್ಯಾಂಕ್‌, ನಲ್ಲಿಗಳಿಂದ ನೀರು ಪೋಲು

ಎಂಕೆಹುಬ್ಬಳ್ಳಿ: ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗಿದೆ...

Vijaya Karnataka 17 Dec 2018, 5:00 am
ಎಂ.ಕೆ.ಹುಬ್ಬಳ್ಳಿ : ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇವು ತುಂಬಿ ಹರಿದು ನೀರು ಚರಂಡಿ ಪಾಲಾಗುತ್ತಿರುವುದು ಇಲ್ಲಿನ ಅನೇಕ ವಾರ್ಡ್‌ಗಳಲ್ಲಿ ಕಂಡು ಬರುತ್ತಿದೆ.
Vijaya Karnataka Web BEL-16MKH1(2)


ಪಟ್ಟಣದಲ್ಲಿ ವ್ಯವಸ್ಥಿತ ರೀತಿಯಲ್ಲಿ ನೀರು ಬಿಡುವ ಯೋಜನೆ ಇಲ್ಲದೇ ಇರುವುದರಿಂದ ಸಾಕಷ್ಟು ನೀರು ಪೋಲಾಗುತ್ತಿದೆ. ವಿದ್ಯುತ್‌ ಕಡಿತವಾದಾಗ ಮಾತ್ರ ಈ ಟ್ಯಾಂಕ್‌ಗಳಿಂದ ನೀರು ಹರಿಯುವುದು ನಿಲ್ಲುತ್ತೆ ಎಂದು ಅನೇಕರು ತಮಾಷೆ ಮಾಡುತ್ತಾರೆ.

ಇನ್ನು ಮನೆಗಳಲ್ಲಿ ವೈಯಕ್ತಿಕವಾಗಿ ಪಡೆದ ನಲ್ಲಿಗಳಿಗೆ ಅನೇಕರು ಚಾವಿ ಕೂಡಿಸಿಲ್ಲದ ಕಾರಣ ಅವರಿಗೆ ನೀರು ಸಾಕಾದ ಮೇಲೆ ನೀರು ಚರಂಡಿ ಪಾಲಾಗುತ್ತಿದೆ. ಪೋಲಾಗುತ್ತಿರುವ ನೀರು ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿ ಅದರ ಸುತ್ತಮುತ್ತವಿರುವ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಲಕ್ಷ ಣಗಳು ಕಾಣುತ್ತಿವೆ. ಇದೆ ರೀತಿ ನೀರು ಪೋಲಾಗುವುದು ಮುಂದುವರಿದರೆ ಬೇಸಿಗೆಯಲ್ಲಿ ಪಟ್ಟಣದಲ್ಲಿ ನೀರಿಗಾಗಿ ಹಾಹಾಕಾರ ಆಗುವುದಂತೂ ಸತ್ಯ. ಅದಕ್ಕಾಗಿ ಸ್ಥಳೀಯ ಆಡಳಿತ ಮಂಡಳಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ. ಪಟ್ಟಣದ ಪ್ರತಿ ಮನೆಗೆ ತೆರಳಿ ನಳಕ್ಕೆ ಚಾವಿ ಕೂಡಿಸುವ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ