ಯಮಕನಮರಡಿ: ಸಮೀಪದ ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕವಿತಾ ಶಶಿಧರ ದೇವರಮನಿ (19) ಮೃತ ಮಹಿಳೆ. ಪತ್ನಿ ನೇಣಿಗೆ ಶರಣಾದ ವಿಷಯ ತಿಳಿದ ಪತಿ ಶಶಿಧರ ದೇವರಮನಿ ಸಹ ವಿಷ ಸೇವಿಸಿ ಅಸ್ವಸ್ಥರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಕ್ಕೇರಿ ತಹಸೀಲ್ದಾರ ಎನ್.ಬಿ.ಪಾಟೀಲ, ಯಮಕನಮರಡಿ ಪಿಎಸ್ಐ ಗಜಾನನ ನಾಯಿಕ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.
ಪತ್ನಿ ಆತ್ಮಹತ್ಯೆ; ವಿಷ ಸೇವಿಸಿದ ಪತಿ
ಸಮೀಪದ ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕವಿತಾ ಶಶಿಧರ ದೇವರಮನಿ (19) ಮೃತ ಮಹಿಳೆ...
Vijaya Karnataka 27 Nov 2018, 5:00 am