ಬೆಳಗಾವಿ: ತಾಲೂಕಿನ ಕುದ್ರೆಮನಿ ಗ್ರಾಮದ ಹೊಲದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಗುರುವಾರ ರೈತರೋಬ್ಬರ ಮೇಲೆ ದಾಳಿ ಮಾಡಿವೆ. ಘಟನೆಯಲ್ಲಿ ದೇವರ್ಡೇ ಗ್ರಾಮದ ಸಚಿನ್ ಗೋರುಲೆ ಎಂಬುವರು ಗಾಯಗೊಂಡಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರ ಭಾಗದ ಆನೆಗಳು ಇಲ್ಲಿಗೆ ಆಗಮಿಸಿದ್ದು, ಅವುಗಳನ್ನು ಓಡಿಸಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ. ಚಂದಗಡ ಅರಣ್ಯಾಧಿಕಾರಿ ರಾಜನ್ ದೇಸಾಯಿ ಮತ್ತು ರಾಜೇಂದ್ರ ಗವಸ ಸ್ಥಳ ಪರಿಶೀಲನೆ ನಡೆಸಿ, ಆನೆಗಳನ್ನು ಕಾಡಿಗಟ್ಟಲು ಕಾರಾರಯಚರಣೆ ಕೈಗೊಂಡಿದ್ದಾರೆ.
ಕಾಡಾನೆ ದಾಳಿ: ವ್ಯಕ್ತಿಗೆ ಗಾಯ
Vijaya Karnataka 2 Dec 2017, 5:00 am