ಆ್ಯಪ್ನಗರ

ಕಾಂಗ್ರೆಸ್‌ ಬಿಡಲ್ಲ: ಮಹೇಶ್‌ ಕುಮಠಳ್ಳಿ

ಅಥಣಿ: ''ಅನಿವಾರ್ಯ ಕಾರಣಗಳಿಂದ ಊರಲ್ಲಿ ಇಲ್ಲದ ಕಾರಣ ಜ18ರಂದು ನಡೆದ ಸಿಎಲ್‌ಪಿ ಸಭೆಗೆ ಹಾಜರಾಗಲು ಆಗಿಲ್ಲ...

Vijaya Karnataka 26 Jan 2019, 5:00 am
Vijaya Karnataka Web will not leave congress says mahesh kumthalli
ಕಾಂಗ್ರೆಸ್‌ ಬಿಡಲ್ಲ: ಮಹೇಶ್‌ ಕುಮಠಳ್ಳಿ
ಅಥಣಿ: ''ಅನಿವಾರ್ಯ ಕಾರಣಗಳಿಂದ ಊರಲ್ಲಿ ಇಲ್ಲದ ಕಾರಣ ಜ.18ರಂದು ನಡೆದ ಸಿ.ಎಲ್‌.ಪಿ. ಸಭೆಗೆ ಹಾಜರಾಗಲು ಆಗಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ'', ಎಂದು ಶಾಸಕ ಮಹೇಶ್‌ ಕುಮಠಳ್ಳಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ''ಈಗಾಗಲೇ ಪಕ್ಷ ನೀಡಿರುವ ನೋಟಿಸ್‌ಗೆ ಉತ್ತರಿಸಿದ್ದೇನೆ. ನನಗೆ ನನ್ನ ಮತ ಕ್ಷೇತ್ರದ ಅಭಿವೃದ್ಧಿ ಬಿಟ್ಟು ಬೇರಾವ ವಿಷಯ ಗೊತ್ತಿಲ್ಲ. ನಾನು ಎಲ್ಲಿಯೂ ಪಕ್ಷ ತೊರೆಯುವ ಕುರಿತು ಮಾತನಾಡಿಲ್ಲ. 25 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದು, ಮುಂದೆ ಕೂಡ ಇಲ್ಲಿಯೇ ಇರುವೆ. ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ'', ಎಂದು ಸ್ಪಷ್ಟಪಡಿಸಿದರು.

''ನನಗೆ ಮಂತ್ರಿ ಅಥವಾ ನಿಗಮ ಮಂಡಳಿಗಳ ಆಸೆ ಇಲ್ಲ. ವರಿಷ್ಠರು ಕೊಡುತ್ತೇವೆಂದರೂ ನನಗೆ ಬೇಡ. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟರೆ ಸಾಕು. ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕೆ ಸದಾ ಸೇವೆ ಸಲ್ಲಿಸಲು ಸಿದ್ಧ'', ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ