ಬೆಳಗಾವಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೇ ಹೆಬ್ಬಾಳಕರ್ ಅವರ ಬೆಳಗಾವಿಯ ಕುವೆಂಪು ನಗರದಲ್ಲಿರುವ ಮನೆ ಮುಂದೆ ಗುರುವಾರ ಬೆಳಗ್ಗೆ ವಾಮಾಚಾರಕ್ಕೆ ಬಳಸುವ ವಸ್ತುಗಳು ಕಂಡುಬಂದಿವೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಕೆಳಗೆ ನಾಲ್ಕೈದು ನಿಂಬೆ ಹಣ್ಣುಗಳು, ಒಡೆದ ತೆಂಗಿನಕಾಯಿ ಪತ್ತೆಯಾಗಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಕ್ಷ್ಮೇ ಹೆಬ್ಬಾಳಕರ್, ''ಮಾಟ, ವಾಮಾಚಾರದಂತಹ ವಿಷಯಗಳಲ್ಲಿ ನನಗೆ ನಂಬಿಕೆ ಇಲ್ಲ, ಆದರೆ, ಕಳೆದ ವಿಧಾನಸಭೆ ಚುನಾವಣೆ ನಂತರದ ದಿನಗಳಿಂದ ಪ್ರತೀ ವಾರ ಮನೆ ಸುತ್ತಮುತ್ತ ಇಂಥ ವಸ್ತುಗಳು ಕಂಡುಬರುತ್ತಿವೆ. ಈ ಕುರಿತು ಎಪಿಎಂಸಿ ಠಾಣೆ ಸಿಪಿಐಗೆ ಮೌಖಿಕ ದೂರು ನೀಡಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಲಿಖಿತ ಪೊಲೀಸ್ ದೂರು ನೀಡುತ್ತೇನೆ'' ಎಂದು ತಿಳಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ್ ಮನೆ ಮುಂದೆ ವಾಮಾಚಾರ?
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೇ ಹೆಬ್ಬಾಳಕರ್ ಅವರ ಬೆಳಗಾವಿಯ ಕುವೆಂಪು ನಗರದಲ್ಲಿರುವ ಮನೆ ಮುಂದೆ ಗುರುವಾರ ಬೆಳಗ್ಗೆ ವಾಮಾಚಾರಕ್ಕೆ ಬಳಸುವ ವಸ್ತುಗಳು ಕಂಡುಬಂದಿವೆ...
ವಿಕ ಸುದ್ದಿಲೋಕ 21 Apr 2017, 9:45 am