ಆ್ಯಪ್ನಗರ

ಹಂದಿಜ್ವರದಿಂದ ಮಹಿಳೆ ಸಾವು

ಕಾಗವಾಡ (ಬೆಳಗಾವಿ): ಹಂದಿ ಜ್ವರದಿಂದ ಮಹಿಳೆಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ ಮೀನಾಕ್ಷಿ ಶಶಿಕಾಂತ ಮೋದಿ(44) ಮೃತಪಟ್ಟವರು...

Vijaya Karnataka 25 Feb 2019, 5:00 am
ಕಾಗವಾಡ (ಬೆಳಗಾವಿ) : ಹಂದಿ ಜ್ವರದಿಂದ ಮಹಿಳೆಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ.
Vijaya Karnataka Web BEL-24 KAGWAD 1 NEWS MINAKSHI MODI PHOTO


ಮೀನಾಕ್ಷಿ ಶಶಿಕಾಂತ ಮೋದಿ(44) ಮೃತಪಟ್ಟವರು. ಅವರು ಶೇಡಬಾಳ ಸ್ಟೇಶನ್‌ ಗ್ರಾಮದ ಸರಕಾರಿ ಕನ್ನಡ ಮತ್ತು ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮೀನಾಕ್ಷಿ ಅವರು ತಿರುಪತಿಗೆ ಹೋಗಿದ್ದರು. ಮರಳಿ ಬಂದ ಬಳಿಕ ಅವರಿಗೆ ಮೈಕೈ ನೋವು, ಜ್ವರ ಕಾಣಿಸಿಕೊಂಡಿದ್ದರಿಂದ ಶೇಡಬಾಳದ ಖಾಸಗಿ ಆಸ್ಪತ್ರೆಯಲ್ಲಿ ಉಪಚರಿಸಲಾಗಿತ್ತು. ಆದರೂ ಜ್ವರ ಕಡಿಮೆಯಾಗದ ಕಾರಣ ಮಿರಜ್‌ನ ಡಾ. ಭಾರತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಕ್ತ ಪರೀಕ್ಷೆ ಬಳಿಕ ಮೀನಾಕ್ಷಿ ಅವರಿಗೆ ಹಂದಿಜ್ವರ ಇದೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ 5 ದಿನಗಳ ಬಳಿಕ ಮೃತಪಟ್ಟಿದ್ದಾರೆ ಎಂದು ಪತಿ ಶಶಿಕಾಂತ ಮೋದಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ