ಆ್ಯಪ್ನಗರ

ಪತಿಯಿಂದ ಪತ್ನಿ ಕೊಲೆಧಿಧಿ

ಬೆಳಗಾವಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ...

Vijaya Karnataka 15 Feb 2020, 5:00 am
ಬೆಳಗಾವಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಇಲ್ಲಿನ ವಿಜಯ ನಗರದಲ್ಲಿನಡೆದಿದೆ.
Vijaya Karnataka Web 14KAVITA PISE1073723
ಕವಿತಾ ಪಿಸೆ


ಕವಿತಾ ಪಿಸೆ (30) ಕೊಲೆಗೀಡಾಗಿರುವ ಮಹಿಳೆ. ಪರಶುರಾಮ ಗಣಪತರಾವ ಪಿಸೆ ಕೊಲೆ ಆರೋಪಿ.

ಮೂಲತಃ ವಿಜಯಪುರ ಜಿಲ್ಲೆತಾಳಿಕೋಟೆ ಪಟ್ಟಣದ ಪರಶುರಾಮ ಪಿಸೆ ಬ್ಯಾಂಕ್‌ ಉದ್ಯೋಗದ ಮೇಲೆ ಬೆಳಗಾವಿಯ ವಿಜಯನಗರದಲ್ಲಿಮನೆ ಮಾಡಿಕೊಂಡಿದ್ದರು. ಎಂಟು ವರ್ಷದ ಹಿಂದೆ ಕವಿತಾರನ್ನು ಮದುವೆಯಾಗಿದ್ದ ಇವರಿಗೆ ಏಳು ವರ್ಷ ಮತ್ತು ಆರು ತಿಂಗಳ ಹೆಣ್ಣು ಮಕ್ಕಳಿದ್ದರು.

ಮಕ್ಕಳ ನಿರ್ವಹಣೆ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಗುರುವಾರ ಸಂಜೆ ಮನಸ್ತಾಪ ವಿಕೋಪಕ್ಕೆ ಹೋಗಿದ್ದರಿಂದ ಪರಶುರಾಮ ಆವೇಶದಲ್ಲಿಪತ್ನಿಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ ಎಂದು ಮೃತ ಕವಿತಾರ ತಂದೆ ಸುನೀಲ ರಂಗದಾಳ ದೂರು ದಾಖಲಿಸಿರುವುದಾಗಿ ಕ್ಯಾಂಪ್‌ ಠಾಣೆ ಪೊಲೀಸರು ತಿಳಿಸಿದ್ದಾರೆ. ಆರೋಪಿ ಪರಶುರಾಮ ಪಿಸೆ ಈಗ ಪೊಲೀಸರ ವಶದಲ್ಲಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ