ಆ್ಯಪ್ನಗರ

ಮಹಿಳೆ ಕೊಲೆ: ಪತಿ ಅಂದರ್‌

ಖಾನಾಪುರ: ಪಟ್ಟಣದ ಹೊರವಲಯದ ಹತ್ತರಗುಂಜಿ ಅರಣ್ಯದಲ್ಲಿ ಬುಧವಾರ ಪತ್ತೆಯಾದ ಇಂದ್ರಾಯಿಣಿ ಗುರವ ಕೊಲೆ ...

Vijaya Karnataka 20 Jul 2018, 5:00 am
ಖಾನಾಪುರ: ಪಟ್ಟಣದ ಹೊರವಲಯದ ಹತ್ತರಗುಂಜಿ ಅರಣ್ಯದಲ್ಲಿ ಬುಧವಾರ ಪತ್ತೆಯಾದ ಇಂದ್ರಾಣಿ ಗುರವ ಕೊಲೆ ಪ್ರಕರಣವನ್ನು ಖಾನಾಪುರ ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದಾರೆ.
Vijaya Karnataka Web BEL-19KHANAPUR8


ಸಿಪಿಐ ಐ.ಎಸ್‌.ಗುರುನಾಥ ನೇತೃತ್ವದಲ್ಲಿ ತನಿಖೆ ಕೈಗೊಂಡ ಸಿಬ್ಬಂದಿ ಇಂದ್ರಾಯಿಣಿಯ ತವರು ಮನೆಯವರು ನೀಡಿದ ದೂರನ್ನಾಧರಿಸಿ ಜುಂಜವಾಡ ಗ್ರಾಮದ ತನ್ನ ಮನೆಯಲ್ಲಿದ್ದ ಆಕೆಯ ಪತಿ ಮಾರುತಿ ಗುರವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಪತ್ನಿಯನ್ನು ತಾನೇ ಕೊಲೆ ಮಾಡಿರುವುದಾಗಿ ಮಾರುತಿ ಒಪ್ಪಿಕೊಂಡಿದ್ದಾನೆ. ಗುರುವಾರ ಆತನನ್ನು ಘಟನಾ ಸ್ಥಳಕ್ಕೆ ತರೆತಂದ ಪೊಲೀಸರು ಪಂಚನಾಮೆ ಕೈಗೊಂಡರು. ಬಳಿಕ ಆತನನ್ನು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಮೂಲಗಳು ತಿಳಿಸಿವೆ.

ಉಸಿರುಗಟ್ಟಿಸಿ ಕೊಂದ: 3 ವರ್ಷಗಳ ಹಿಂದೆ ಜುಂಜವಾಡದ ಮಾರುತಿಯನ್ನು ವರಿಸಿದ್ದ ಇಂದ್ರಾಣಿ ಮದುವೆಯಾದ ಒಂದು ವರ್ಷದಲ್ಲೇ ಪತಿಯೊಂದಿಗೆ ಜಗಳವಾಡಿ ತವರಿಗೆ ಮರಳಿದ್ದರು. ಪಟ್ಟಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಆಕೆ ಹಳ್ಳಿಯ ಜೀವನ ಇಷ್ಟಪಡದೇ ಪತಿಯೊಂದಿಗೆ ಶಹರದಲ್ಲಿ ಮನೆ ಮಾಡಿ ಇರಲು ಬಯಸಿದ್ದರು. ಇದಕ್ಕೆ ಪತಿ ಒಪ್ಪದ್ದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು.
ಜು.10ರಂದು ಪರಿಚಯದವರ ಮದುವೆಗೆ ಹೋಗುವುದಾಗಿ ಹೇಳಿದ್ದ ಇಂದ್ರಾಣಿ ಮನೆಯಿಂದ ನಾಪತ್ತೆಯಾಗಿದ್ದರು. ಅದೇ ದಿನ ಆಕೆಯ ಇಚ್ಛೆಯಂತೆ ಹತ್ತರಗುಂಜಿ ನೆಡುತೋಪಿನಲ್ಲಿ ಭೇಟಿಯಾದ ಪತಿ ಮಾರುತಿ ಗುರವ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ. ಬಳಿಕ ಇಬ್ಬರೂ ಹಳೆಯ ವಿಷಯ ಪ್ರಸ್ತಾಪಿಸಿ ಮಾತಿಗೆ ಮಾತು ಬೆಳೆಸಿ ಜಗಳವಾಡಿದ್ದರು. ಸಿಟ್ಟಿನ ಭರದಲ್ಲಿ ಮಾರುತಿ ಇಂದ್ರಾಣಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತನಿಖೆ ನಡೆಸಿರುವ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ