ಆ್ಯಪ್ನಗರ

20 ಸಾವಿರ ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ

ನಿಪ್ಪಾಣಿ (ಬೆಳಗಾವಿ): ದಾರಿಯಲ್ಲಿ ಬಿದ್ದಿದ್ದ ಇಪ್ಪತ್ತು ಸಾವಿರ ರೂ ನಗದು ಹಣವನ್ನು ಕಳೆದುಕೊಂಡವರಿಗೆ ಮರಳಿಸಿ ಮಹಿಳೆಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ...

Vijaya Karnataka 6 Dec 2018, 5:00 am
ನಿಪ್ಪಾಣಿ (ಬೆಳಗಾವಿ) : ದಾರಿಯಲ್ಲಿ ಬಿದ್ದಿದ್ದ ಇಪ್ಪತ್ತು ಸಾವಿರ ರೂ. ನಗದು ಹಣವನ್ನು ಕಳೆದುಕೊಂಡವರಿಗೆ ಮರಳಿಸಿ ಮಹಿಳೆಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
Vijaya Karnataka Web BEL-5CKD3


ಪಟ್ಟಣದ ಅಶೋಕನಗರದಲ್ಲಿರುವ ದಿ ವಿಶ್ವೇಶ್ವರ ಸಹಕಾರಿ ಬ್ಯಾಂಕ್‌ ಶಾಖೆಯ ಜೀವನ ವಿಮೆ ಪ್ರತಿನಿಧಿ ಶಶಿಕಲಾ ಶಿವಪುತ್ರ ಘೋಡಗೇರಿ ಅವರಿಗೆ ಬ್ಯಾಂಕಿಗೆ ಆಗಮಿಸುವ ವೇಳೆ ದಾರಿಯಲ್ಲಿ 20 ಸಾವಿರ ರೂ. ಸಿಕ್ಕಿತ್ತು. ನಂತರ ಬ್ಯಾಂಕ್‌ನ ಶಾಖಾ ವ್ಯಾವಸ್ಥಾಪಕ ಹಾಗೂ ಸಿಬ್ಬಂದಿ ಜತೆ ಚರ್ಚಿಸಿ, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಹಣ ಕಳೆದುಕೊಂಡಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ, ಅವರಿಗೆ ಮರಳಿಸಿದ್ದಾರೆ. ಯಮಗರ್ಣಿ ಗ್ರಾಮದ ಮರಳು ಪೂರೈಕೆದಾರ ವಿಜೇಂದ್ರ ಮಾರುತಿ ಶಿಂಧೆ ಬೈಕ್‌ನಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಅವರ ಪ್ಯಾಂಟ್‌ ಜೇಬಿನಿಂದ ಹಣ ಬಿದ್ದಿತ್ತು. ಶಶಿಕಲಾ ಅವರ ಪ್ರಾಮಾಣಿಕತೆಯನ್ನು ವಿಜೇಂದ್ರ ಸೇರಿದಂತೆ ಬ್ಯಾಂಕ್‌ ಅಧಿಕಾರಿಗಳು, ಸಿಬ್ಬಂದಿ ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ