ಆ್ಯಪ್ನಗರ

ಜಗತ್ತನ್ನಪ್ಪುವ ಭಾರತೀಯ ಸಂಸ್ಕೃತಿಯನ್ನು ವಿಶ್ವ ಒಪ್ಪಿದೆ

ಗೋಕಾಕ: ಜಗತ್ತಿನ ಜನರನ್ನೆಲ್ಲ ತಮ್ಮವರಂತೆ ನೋಡಿ, ಅಧ್ಯಾತ್ಮದ ಮೂಲಕ ಎಲ್ಲರ ನೋವುಗಳಿಗೆ ಸ್ಪಂದಿಸುವ ಭಾರತೀಯ ಸಂಸ್ಕೃತಿಯನ್ನು ಇಡೀ ಜಗತ್ತೇ ಗೌರವಿಸುತ್ತಿದೆ ...

Vijaya Karnataka 8 Jun 2019, 5:00 am
ಗೋಕಾಕ : ಜಗತ್ತಿನ ಜನರನ್ನೆಲ್ಲ ತಮ್ಮವರಂತೆ ನೋಡಿ, ಅಧ್ಯಾತ್ಮದ ಮೂಲಕ ಎಲ್ಲರ ನೋವುಗಳಿಗೆ ಸ್ಪಂದಿಸುವ ಭಾರತೀಯ ಸಂಸ್ಕೃತಿಯನ್ನು ಇಡೀ ಜಗತ್ತೇ ಗೌರವಿಸುತ್ತಿದೆ ಎಂದು ವಿಜಯಪುರ ಹಾಗೂ ಗದಗಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.
Vijaya Karnataka Web BEL-7GOK2


ಅವರು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ ಗುರುವಾರ ನಡೆದ ಶಾರದಾ ಶಕ್ತಿ ಪೀಠದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವರಲ್ಲಿ ಶಾರೀರಿಕ, ಮಾನಸಿಕ, ಬೌದ್ಧಿಕ ಹಾಗೂ ಭಾವನಾತ್ಮಕ ಶಕ್ತಿಗಳಿದ್ದು, ಯೋಗಗಳಿಂದ ಅವುಗಳನ್ನು ಸದೃಢಗೊಳಿಸಿಕೊಂಡರೆ ಜೀವನ ಅರ್ಥಪೂರ್ಣವಾಗಿರುತ್ತದೆ. ಯೋಗಿಯಾಗಿ ಜಗತ್ತಿನಲ್ಲಿ ಸಿಗುವ ಎಲ್ಲವನ್ನೂ ಪಡೆದುಕೊಳ್ಳಬೇಕು. ಯಾವುದನ್ನೂ ತ್ಯಾಗ ಮಾಡಬೇಡ, ಅದೇ ನಿನ್ನನ್ನು ತ್ಯಾಗ ಮಾಡುತ್ತದೆ. ಇದೇ ಹಿಂದು ಸನಾತನ ಧರ್ಮದ ಸಾರವಾಗಿದ್ದು, ಇದನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹೊಸಪೇಟೆಯ ಪ್ರಮೋದಿನಿ ಮಾತೆ, ಸ್ಥಳೀಯ ಶಾರದಾ ಶಕ್ತಿ ಪೀಠದ ಶಿವಮಯಿ ಮಾತೆ, ಗಣ್ಯರಾದ ನಾಗಪ್ಪ ಚಿಪ್ಪಲಕಟ್ಟಿ, ಮಹಾದೇವಪ್ಪ ಈಟಿ, ವಸಂತ ಕುಲಕರ್ಣಿ, ರಾಮಚಂದ್ರ ಕಾಕಡೆ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ