ಮಹೇಶ್ ವಿಜಾಪುರ
ಬೆಳಗಾವಿ: ಕೋವಿಡ್ ಆವರಿಸಿಕೊಂಡಿರುವ ಈ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಆರೋಗ್ಯ ಕುರಿತ ನಿರ್ಲಕ್ಷ್ಯವೇ ಮುಖ್ಯ ಕಾರಣವಾಗುತ್ತಿದೆ. ಅದರಲ್ಲೂ ಮುನ್ನೆಚ್ಚರಿಕೆಯೇ ಮೊದಲ ಚಿಕಿತ್ಸೆ ಎನಿಸಿಕೊಂಡಿರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಇನ್ನಷ್ಟು ನಿರ್ಲಕ್ಷಿಸುತ್ತಿರುವುದರಿಂದ ಹೃದಯಾಘಾತದಂಥ ಅಪಾಯಕಾರಿ ಕಾಯಿಲೆ ದ್ವಿಗುಣಗೊಳ್ಳುತ್ತಿದೆ.
ಕೋವಿಡ್ ಆರಂಭಕ್ಕೂ ಮೊದಲು ಜಿಲ್ಲೆಯಲ್ಲಿ ಪ್ರತಿದಿನ 1500ಕ್ಕೂ ಹೆಚ್ಚು ಜನರು ಹೃದಯ ಸಂಬಂಧಿ ಚಿಕಿತ್ಸೆಗೆ ಒಳಪಡುತ್ತಿದ್ದರು. ಅದರಲ್ಲೂಆ್ಯಂಜಿಯೋಗ್ರಾಫಿ ತಪಾಸಣೆಗೆಂದೇ ಪ್ರತಿ ತಿಂಗಳು 1200ಕ್ಕೂ ಅಧಿಕ ಜನರು ಆಸ್ಪತ್ರೆ ಮೆಟ್ಟಿಲೇರುತ್ತಿದ್ದರು. ಈಗ ಇಂತಹ ಪರೀಕ್ಷೆಗಳ ಸಂಖ್ಯೆ ಅರ್ಧಕ್ಕಿಂತ ಕಡಿಮೆಯಾಗಿದೆ. ಅಂದರೆ ಹೃದಯ ಸಂಬಂಧಿ ರೋಗಗಳನ್ನು ಜನ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತದೆ ವೈದ್ಯ ಲೋಕ.
ಜೀವನಶೈಲಿ ಬದಲಾವಣೆ: ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಬಹುತೇಕ ಜನರ ಜೀವನ ಶೈಲಿಯೇ ಬದಲಾಗಿದೆ. ವಿವಿಧ ಸಂಸ್ಥೆ, ಕಂಪನಿಗಳಲ್ಲಿಕೆಲಸ ಮಾಡುತ್ತಿರುವವರ ಪೈಕಿ ಶೇ.60ರಷ್ಟು ಜನರು ಮನೆಯಿಂದ ಕೆಲಸ (ವರ್ಕ್ ಫ್ರಂ ಹೋಮ್) ನಿರ್ವಹಿಸುತ್ತಿದ್ದಾರೆ. ಮಹಿಳೆಯರು, ವೃದ್ಧರು, ಮಕ್ಕಳ ಹೆಚ್ಚಿನ ಸಮಯ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಕಳೆದುಹೋಗುತ್ತಿದೆ. ಉದ್ಯಮಿಗಳು, ವ್ಯಾಪಾರಿಗಳು ಕೂಡ ದೈಹಿಕ ವ್ಯಾಯಾಮ ಮರೆತಿದ್ದಾರೆ.
ಇಂದು ವಿಶ್ವ ಹೃದಯ ದಿನ: ಕೋವಿಡ್ ಆರಂಭಕ್ಕೆ ಕುಸಿದಿದ್ದ ‘ಹೃದ್ರೋಗ’ ಮರಳಿ ಯಥಾಸ್ಥಿತಿಗೆ!
ಮನೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿರುವವರ ಪೈಕಿ ಬಹಳಷ್ಟು ಜನರು ಮಾನಸಿಕ ಒತ್ತಡ ಮತ್ತು ಮೋಜು-ಮಸ್ತಿಗಾಗಿ ತಂಬಾಕು, ಗುಟ್ಕಾ, ಮದ್ಯ ಸೇವನೆ ಸೇರಿದಂತೆ ವಿವಿಧ ಹವ್ಯಾಸಗಳನ್ನು ಹೆಚ್ಚಿಸಿಕೊಂಡಿದ್ದಾರೆ. ದೇಹ ತೂಕದಲ್ಲೂಏರಿಕೆ ಕಂಡು ಬರುತ್ತಿರುವುದು ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳಲು ಮೂಲ ಕಾರಣವಾಗುತ್ತಿದೆ. ಬಿಪಿ, ಶುಗರ್ ಸಾಮಾನ್ಯವಾಗಿದ್ದರೂ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಒಂದಿಷ್ಟು ಜನರು ಔಷಧ ಸಿಗುತ್ತಿಲ್ಲಅಥವಾ ಔಷಧ ತರಲು ಆಗುತ್ತಿಲ್ಲಎನ್ನುವ ಕಾರಣದಿಂದಲೂ ಅಪಾಯಕ್ಕೆ ಸಿಲುಕುತ್ತಿದ್ದಾರೆ.
'ವಿಶ್ವ ಹೃದಯ ದಿನ', ಕೊರೊನಾ ವೇಳೆ ಇರಲಿ ಹೃದಯದ ಬಗ್ಗೆ ಕಾಳಜಿ
ಜತೆಗೆ ಆಸ್ಪತ್ರೆ ಕಟ್ಟೆ ಏರಿದರೆ ಕೊರೊನಾ ಸೋಂಕು ಆವರಿಸಿಕೊಳ್ಳುತ್ತದೆ ಎನ್ನುವ ಭಯದಿಂದಲೂ ಬಹಳಷ್ಟು ಜನರು ಹೃದಯ ಸಂಬಂಧಿ ರೋಗ ಲಕ್ಷಣಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಕೆಲವರು ತೀವ್ರ ನೋವು ಕಾಣಿಸಿಕೊಂಡ ಮೇಲೆಯೇ ಆಸ್ಪತ್ರೆಗೆ ದಾಖಲಾಗುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಎಲ್ಲಸೌಲಭ್ಯಗಳಿದ್ದರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಬಹಳಷ್ಟು ರೋಗಿಗಳು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ ಎನ್ನುತ್ತಾರೆ ತಜ್ಞ ವೈದ್ಯರು.
ಹೃದ್ರೋಗಕ್ಕೆ ವಾಯುಮಾಲಿನ್ಯವೂ ಕಾರಣ: ಜಯದೇವ ಹೃದೋಗ ಸಂಸ್ಥೆ ಅಧ್ಯಯನದಿಂದ ಬಹಿರಂ
ಇನ್ನಷ್ಟು ಎಚ್ಚರಿಕೆ ಬೇಕು
''ಕೋವಿಡ್ ಸೋಂಕು ಕಾಣಿಸಿಕೊಂಡು ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿರುವ 60ಕ್ಕೂ ಹೆಚ್ಚು ವಯಸ್ಸಿನ ಬಿಪಿ, ಶುಗರ್ ಹೊಂದಿರುವ ರೋಗಿಗಳಲ್ಲಿಶೇ.30ರಿಂದ 40 ರಷ್ಟು ಜನರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗುತ್ತಿದ್ದಾರೆ. ಪಶ್ಚಿಮ ಭಾಗದ ದೇಶಗಳಿಗೆ ಹೋಲಿಸಿದರೆ ಏಷ್ಯಾ ಖಂಡದ ದೇಶಗಳಲ್ಲಿನ ಜನರ ರಕ್ತ ದಪ್ಪವಾಗಿರುವ ಕಾರಣಕ್ಕೆ ಹೃದಯಾಘಾತ ಸಂಖ್ಯೆ ಅಧಿಕ. ಅದರಲ್ಲೂಈಗ ಕೋವಿಡ್ ಕಾರಣದಿಂದ ರೋಗಿಗಳ ರಕ್ತದಲ್ಲೂಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಲೇಬೇಕು'', ಎನ್ನುತ್ತಾರೆ ಹೃದಯ ರೋಗ ತಜ್ಞ ವೈದ್ಯ ಡಾ.ಸುರೇಶ್ ಪಟ್ಟೇದ.
'ಹೃದಯ ರಕ್ಷಣೆಗೆ ಒತ್ತು ನೀಡಿ, ಇತರರ ಹೃದಯ ಕಾಯಿಲೆಗಳ ರಕ್ಷಣೆ ಮಾಡಿ' - ಇದು ಈ ವರ್ಷದ ಹೃದ್ರೋಗ ಜಾಗೃತಿ ಘೋಷ ವಾಕ್ಯ.
ಏನು ಮಾಡಬೇಕು?
* ಹೃದಯ ಸಂಬಂಧಿ ರೋಗಕ್ಕೆ ಧೈರ್ಯವೇ ಮೊದಲ ಚಿಕಿತ್ಸೆ.
* ತೀವ್ರ ಎದೆನೋವು, ಬೆವರು, ದಮ್ಮು, ಉಸಿರಾಟ ತೊಂದರೆ, ಬೆನ್ನು ನೋವಿನಂತಹ ರೋಗ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆಗೆ ಮುಂದಾಗಿ.
* ಹೃದಯ ರೋಗಿಗಳೂ ಸೇರಿದಂತೆ ಯಾರೊಬ್ಬರೂ ಔಷಧ ಸೇವನೆ ಕೈ ಬಿಡಬೇಡಿ.
* ಕೋವಿಡ್ಗೆ ತುತ್ತಾಗಿ ಗುಣಮುಖರಾಗಿದ್ದರೂ ನಾಲ್ಕು ವಾರಗಳ ನಂತರ ರಕ್ತ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
* ಹೃದಯ ಕಾಯಿಲೆ ಕಪ್ಪು ಚುಕ್ಕೆಯಲ್ಲ. ಜೀವನ ಶೈಲಿ ಬದಲಾಯಿಸಿಕೊಳ್ಳಬೇಕಷ್ಟೆ.
ಸದ್ಯದ ಪರಿಸ್ಥಿತಿಯಲ್ಲಿಪ್ರತಿಯೊಬ್ಬರೂ ಮಾನಸಿಕ ಒತ್ತಡ ನಿಭಾಯಿಸಿಕೊಳ್ಳುವುದು ಅನಿವಾರ್ಯ. ಮನೆಗಳಿಗೆ ಸೀಮಿತವಾಗಿರುವವರು ವ್ಯಾಯಾಮ ಮಾಡಲೇಬೇಕು. ಹೃದಯ ರೋಗ ಲಕ್ಷಣವಿರುವವರು ಧೂಮಪಾನ ಮತ್ತು ಮದ್ಯ ಸೇವನೆ ತ್ಯಜಿಸಬೇಕು.
- ಡಾ.ಸುರೇಶ್ ಪಟ್ಟೇದ. ಹೃದಯ ರೋಗ ತಜ್ಞ ವೈದ್ಯರು,
ತಂಬಾಕು, ಮದ್ಯಸೇವನೆ ಹವ್ಯಾಸವಿರುವ ಮಧುಮೇಹ ರೋಗಿಗಳಲ್ಲಿಸಣ್ಣ ಎದೆ ನೋವು ಕಾಣಿಸಿಕೊಂಡರೂ ಅವರು ತಕ್ಷಣ ಚಿಕಿತ್ಸೆಗೆ ಒಳಪಡಬೇಕು. ಕೊರೊನಾ ನೆಪದಿಂದ ಚಿಕಿತ್ಸೆಯಿಂದ ದೂರ ಉಳಿದರೆ ಪ್ರಾಣಕ್ಕೆ ಆಪತ್ತು.
-ಡಾ.ಗಿರಿಧರ ಪಾಟೀಲ, ತಜ್ಞ ವೈದ್ಯರು, ಬಿಮ್ಸ್
ಬೆಳಗಾವಿ: ಕೋವಿಡ್ ಆವರಿಸಿಕೊಂಡಿರುವ ಈ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಆರೋಗ್ಯ ಕುರಿತ ನಿರ್ಲಕ್ಷ್ಯವೇ ಮುಖ್ಯ ಕಾರಣವಾಗುತ್ತಿದೆ. ಅದರಲ್ಲೂ ಮುನ್ನೆಚ್ಚರಿಕೆಯೇ ಮೊದಲ ಚಿಕಿತ್ಸೆ ಎನಿಸಿಕೊಂಡಿರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಇನ್ನಷ್ಟು ನಿರ್ಲಕ್ಷಿಸುತ್ತಿರುವುದರಿಂದ ಹೃದಯಾಘಾತದಂಥ ಅಪಾಯಕಾರಿ ಕಾಯಿಲೆ ದ್ವಿಗುಣಗೊಳ್ಳುತ್ತಿದೆ.
ಕೋವಿಡ್ ಆರಂಭಕ್ಕೂ ಮೊದಲು ಜಿಲ್ಲೆಯಲ್ಲಿ ಪ್ರತಿದಿನ 1500ಕ್ಕೂ ಹೆಚ್ಚು ಜನರು ಹೃದಯ ಸಂಬಂಧಿ ಚಿಕಿತ್ಸೆಗೆ ಒಳಪಡುತ್ತಿದ್ದರು. ಅದರಲ್ಲೂಆ್ಯಂಜಿಯೋಗ್ರಾಫಿ ತಪಾಸಣೆಗೆಂದೇ ಪ್ರತಿ ತಿಂಗಳು 1200ಕ್ಕೂ ಅಧಿಕ ಜನರು ಆಸ್ಪತ್ರೆ ಮೆಟ್ಟಿಲೇರುತ್ತಿದ್ದರು. ಈಗ ಇಂತಹ ಪರೀಕ್ಷೆಗಳ ಸಂಖ್ಯೆ ಅರ್ಧಕ್ಕಿಂತ ಕಡಿಮೆಯಾಗಿದೆ. ಅಂದರೆ ಹೃದಯ ಸಂಬಂಧಿ ರೋಗಗಳನ್ನು ಜನ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತದೆ ವೈದ್ಯ ಲೋಕ.
ಜೀವನಶೈಲಿ ಬದಲಾವಣೆ: ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಬಹುತೇಕ ಜನರ ಜೀವನ ಶೈಲಿಯೇ ಬದಲಾಗಿದೆ. ವಿವಿಧ ಸಂಸ್ಥೆ, ಕಂಪನಿಗಳಲ್ಲಿಕೆಲಸ ಮಾಡುತ್ತಿರುವವರ ಪೈಕಿ ಶೇ.60ರಷ್ಟು ಜನರು ಮನೆಯಿಂದ ಕೆಲಸ (ವರ್ಕ್ ಫ್ರಂ ಹೋಮ್) ನಿರ್ವಹಿಸುತ್ತಿದ್ದಾರೆ. ಮಹಿಳೆಯರು, ವೃದ್ಧರು, ಮಕ್ಕಳ ಹೆಚ್ಚಿನ ಸಮಯ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಕಳೆದುಹೋಗುತ್ತಿದೆ. ಉದ್ಯಮಿಗಳು, ವ್ಯಾಪಾರಿಗಳು ಕೂಡ ದೈಹಿಕ ವ್ಯಾಯಾಮ ಮರೆತಿದ್ದಾರೆ.
ಇಂದು ವಿಶ್ವ ಹೃದಯ ದಿನ: ಕೋವಿಡ್ ಆರಂಭಕ್ಕೆ ಕುಸಿದಿದ್ದ ‘ಹೃದ್ರೋಗ’ ಮರಳಿ ಯಥಾಸ್ಥಿತಿಗೆ!
ಮನೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿರುವವರ ಪೈಕಿ ಬಹಳಷ್ಟು ಜನರು ಮಾನಸಿಕ ಒತ್ತಡ ಮತ್ತು ಮೋಜು-ಮಸ್ತಿಗಾಗಿ ತಂಬಾಕು, ಗುಟ್ಕಾ, ಮದ್ಯ ಸೇವನೆ ಸೇರಿದಂತೆ ವಿವಿಧ ಹವ್ಯಾಸಗಳನ್ನು ಹೆಚ್ಚಿಸಿಕೊಂಡಿದ್ದಾರೆ. ದೇಹ ತೂಕದಲ್ಲೂಏರಿಕೆ ಕಂಡು ಬರುತ್ತಿರುವುದು ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳಲು ಮೂಲ ಕಾರಣವಾಗುತ್ತಿದೆ. ಬಿಪಿ, ಶುಗರ್ ಸಾಮಾನ್ಯವಾಗಿದ್ದರೂ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಒಂದಿಷ್ಟು ಜನರು ಔಷಧ ಸಿಗುತ್ತಿಲ್ಲಅಥವಾ ಔಷಧ ತರಲು ಆಗುತ್ತಿಲ್ಲಎನ್ನುವ ಕಾರಣದಿಂದಲೂ ಅಪಾಯಕ್ಕೆ ಸಿಲುಕುತ್ತಿದ್ದಾರೆ.
'ವಿಶ್ವ ಹೃದಯ ದಿನ', ಕೊರೊನಾ ವೇಳೆ ಇರಲಿ ಹೃದಯದ ಬಗ್ಗೆ ಕಾಳಜಿ
ಜತೆಗೆ ಆಸ್ಪತ್ರೆ ಕಟ್ಟೆ ಏರಿದರೆ ಕೊರೊನಾ ಸೋಂಕು ಆವರಿಸಿಕೊಳ್ಳುತ್ತದೆ ಎನ್ನುವ ಭಯದಿಂದಲೂ ಬಹಳಷ್ಟು ಜನರು ಹೃದಯ ಸಂಬಂಧಿ ರೋಗ ಲಕ್ಷಣಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಕೆಲವರು ತೀವ್ರ ನೋವು ಕಾಣಿಸಿಕೊಂಡ ಮೇಲೆಯೇ ಆಸ್ಪತ್ರೆಗೆ ದಾಖಲಾಗುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಎಲ್ಲಸೌಲಭ್ಯಗಳಿದ್ದರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಬಹಳಷ್ಟು ರೋಗಿಗಳು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ ಎನ್ನುತ್ತಾರೆ ತಜ್ಞ ವೈದ್ಯರು.
ಹೃದ್ರೋಗಕ್ಕೆ ವಾಯುಮಾಲಿನ್ಯವೂ ಕಾರಣ: ಜಯದೇವ ಹೃದೋಗ ಸಂಸ್ಥೆ ಅಧ್ಯಯನದಿಂದ ಬಹಿರಂ
ಇನ್ನಷ್ಟು ಎಚ್ಚರಿಕೆ ಬೇಕು
''ಕೋವಿಡ್ ಸೋಂಕು ಕಾಣಿಸಿಕೊಂಡು ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿರುವ 60ಕ್ಕೂ ಹೆಚ್ಚು ವಯಸ್ಸಿನ ಬಿಪಿ, ಶುಗರ್ ಹೊಂದಿರುವ ರೋಗಿಗಳಲ್ಲಿಶೇ.30ರಿಂದ 40 ರಷ್ಟು ಜನರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗುತ್ತಿದ್ದಾರೆ. ಪಶ್ಚಿಮ ಭಾಗದ ದೇಶಗಳಿಗೆ ಹೋಲಿಸಿದರೆ ಏಷ್ಯಾ ಖಂಡದ ದೇಶಗಳಲ್ಲಿನ ಜನರ ರಕ್ತ ದಪ್ಪವಾಗಿರುವ ಕಾರಣಕ್ಕೆ ಹೃದಯಾಘಾತ ಸಂಖ್ಯೆ ಅಧಿಕ. ಅದರಲ್ಲೂಈಗ ಕೋವಿಡ್ ಕಾರಣದಿಂದ ರೋಗಿಗಳ ರಕ್ತದಲ್ಲೂಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಲೇಬೇಕು'', ಎನ್ನುತ್ತಾರೆ ಹೃದಯ ರೋಗ ತಜ್ಞ ವೈದ್ಯ ಡಾ.ಸುರೇಶ್ ಪಟ್ಟೇದ.
'ಹೃದಯ ರಕ್ಷಣೆಗೆ ಒತ್ತು ನೀಡಿ, ಇತರರ ಹೃದಯ ಕಾಯಿಲೆಗಳ ರಕ್ಷಣೆ ಮಾಡಿ' - ಇದು ಈ ವರ್ಷದ ಹೃದ್ರೋಗ ಜಾಗೃತಿ ಘೋಷ ವಾಕ್ಯ.
ಏನು ಮಾಡಬೇಕು?
* ಹೃದಯ ಸಂಬಂಧಿ ರೋಗಕ್ಕೆ ಧೈರ್ಯವೇ ಮೊದಲ ಚಿಕಿತ್ಸೆ.
* ತೀವ್ರ ಎದೆನೋವು, ಬೆವರು, ದಮ್ಮು, ಉಸಿರಾಟ ತೊಂದರೆ, ಬೆನ್ನು ನೋವಿನಂತಹ ರೋಗ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆಗೆ ಮುಂದಾಗಿ.
* ಹೃದಯ ರೋಗಿಗಳೂ ಸೇರಿದಂತೆ ಯಾರೊಬ್ಬರೂ ಔಷಧ ಸೇವನೆ ಕೈ ಬಿಡಬೇಡಿ.
* ಕೋವಿಡ್ಗೆ ತುತ್ತಾಗಿ ಗುಣಮುಖರಾಗಿದ್ದರೂ ನಾಲ್ಕು ವಾರಗಳ ನಂತರ ರಕ್ತ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.
* ಹೃದಯ ಕಾಯಿಲೆ ಕಪ್ಪು ಚುಕ್ಕೆಯಲ್ಲ. ಜೀವನ ಶೈಲಿ ಬದಲಾಯಿಸಿಕೊಳ್ಳಬೇಕಷ್ಟೆ.
ಸದ್ಯದ ಪರಿಸ್ಥಿತಿಯಲ್ಲಿಪ್ರತಿಯೊಬ್ಬರೂ ಮಾನಸಿಕ ಒತ್ತಡ ನಿಭಾಯಿಸಿಕೊಳ್ಳುವುದು ಅನಿವಾರ್ಯ. ಮನೆಗಳಿಗೆ ಸೀಮಿತವಾಗಿರುವವರು ವ್ಯಾಯಾಮ ಮಾಡಲೇಬೇಕು. ಹೃದಯ ರೋಗ ಲಕ್ಷಣವಿರುವವರು ಧೂಮಪಾನ ಮತ್ತು ಮದ್ಯ ಸೇವನೆ ತ್ಯಜಿಸಬೇಕು.
- ಡಾ.ಸುರೇಶ್ ಪಟ್ಟೇದ. ಹೃದಯ ರೋಗ ತಜ್ಞ ವೈದ್ಯರು,
ತಂಬಾಕು, ಮದ್ಯಸೇವನೆ ಹವ್ಯಾಸವಿರುವ ಮಧುಮೇಹ ರೋಗಿಗಳಲ್ಲಿಸಣ್ಣ ಎದೆ ನೋವು ಕಾಣಿಸಿಕೊಂಡರೂ ಅವರು ತಕ್ಷಣ ಚಿಕಿತ್ಸೆಗೆ ಒಳಪಡಬೇಕು. ಕೊರೊನಾ ನೆಪದಿಂದ ಚಿಕಿತ್ಸೆಯಿಂದ ದೂರ ಉಳಿದರೆ ಪ್ರಾಣಕ್ಕೆ ಆಪತ್ತು.
-ಡಾ.ಗಿರಿಧರ ಪಾಟೀಲ, ತಜ್ಞ ವೈದ್ಯರು, ಬಿಮ್ಸ್